HD Kumaraswamy: ಕಾಂಗ್ರೆಸ್ ಬಗ್ಗೆ ಮಾತಾಡೋದು ಕೆಸರಿನ ಮೇಲೆ ಕಲ್ಲು ಎರೆಚಿದಂತೆ: HD ಕುಮಾರಸ್ವಾಮಿ!

0
Spread the love

ಬೆಂಗಳೂರು:- ವಸತಿ ಇಲಾಖೆಯಲ್ಲಿನ ಭ್ರಷ್ಟಾಚಾರ ಸತ್ಯ ಎಂಬ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಹೇಳಿಕೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಜನರು ಬೀದಿ-ಬೀದಿಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಅಕ್ರಮ ಆಗಿಲ್ಲ ಅಂತಲೇ ಹೇಳಬೇಕು. ಅದು ಬಿಟ್ಟು ಇನ್ನೇನು ಹೇಳೋಕೆ ಸಾಧ್ಯ? ಈ ಸರ್ಕಾರದಲ್ಲಿ ಏನು ನಡೆಯುತ್ತಿದೆ ಅಂತ 224 ಶಾಸಕರಿಗೂ ಗೊತ್ತಿದೆ ಎಂದು ಹೇಳಿದರು.

Advertisement

ಶಾಸಕರು ಅವರ ಕ್ಷೇತ್ರಕ್ಕೆ ಯಾವುದಾದರೂ ಕಾರ್ಯಕ್ರಮಕ್ಕೆ ಹಣ ತೆಗೆದುಕೊಂಡು ಹೋಗಬೇಕಾದ್ರೆ ಎಲ್ಲಾ ಇಲಾಖೆಗಳಲ್ಲೂ ಪೇಮೆಂಟ್ ಆಗಬೇಕು ಇದೇ ಅವರ ಹಣೆಬರಹ ಈ ಸರ್ಕಾರದಲ್ಲಿ ನಡೆಯುತ್ತಿರೋದು ಇದೆ ಎಂದರು. ಮುಖ್ಯಮಂತ್ರಿಗೆ ಮಾನ, ಮರ್ಯಾದೆ ಇದ್ದರೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ. ಹೆಚ್.ಕೆ ಪಾಟೀಲ್ ಪತ್ರದಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಬರೆದಿದ್ದಾರೆ. ಇದೇ ಪಾಟೀಲ್‌ರನ್ನು 2015ರಲ್ಲಿ ರೆಕಮೆಂಡೇಷನ್ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅದನ್ನು ಇಟ್ಟುಕೊಂಡು ದಿನಾ ಪೂಜೆ ಮಾಡ್ತಿದ್ದಾರೆ. ಈ ಸರ್ಕಾರದಲ್ಲಿ ಮಾತಾಡಲು ಬೇಕಾದಷ್ಟು ವಿಷಯವಿದೆ. ಅದನ್ನು ಮಾತಾಡಿದ್ರೆ ಕೆಸರಿನ ಮೇಲೆ ಕಲ್ಲು ಎರೆಚಿದ ಹಾಗೇ ಆಗುತ್ತದೆ ಎಂದು ಕಿಡಿಕಾರಿದರು.


Spread the love

LEAVE A REPLY

Please enter your comment!
Please enter your name here