ಸಿಎಂ, ಡಿಸಿಎಂ ರಾಜೀನಾಮೆ ಕೊಟ್ಟು ತೊಲಗಿದ್ರೆ ರಾಜ್ಯದಲ್ಲಿ ಬದಲಾವಣೆ ಆಗುತ್ತೆ: ಛಲವಾದಿ ನಾರಾಯಣಸ್ವಾಮಿ

0
Spread the love

ಬೆಂಗಳೂರು: ಸಿಎಂ, ಡಿಸಿಎಂ ರಾಜೀನಾಮೆ ಕೊಟ್ಟು ತೊಲಗಿದ್ರೆ ರಾಜ್ಯದಲ್ಲಿ ಬದಲಾವಣೆ ಕಾಣಬಹುದು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ಹಣ ಕೊಡದೇ ಏನು ಆಗಲ್ಲ. ಇದು ವ್ಯಾಪಾರಕ್ಕೆ ಕೂತಿರುವ ಕಾಂಗ್ರೆಸ್ ಸಂತೆ ಸರ್ಕಾರ. ಇದು ವ್ಯಾಪಾರಕ್ಕೆ ಬಂದ ಸರ್ಕಾರ ಇದು.

Advertisement

ನಮ್ಮ ಮೇಲೆ 40% ಪೇ ಸಿಎಂ ಅಂದರು, ಯೋಗ್ಯತೆಗೆ ಅದನ್ನ ಪ್ರೂವ್ ಮಾಡಿಲ್ಲ. ಸಿಎಂ, ಡಿಸಿಎಂಗೆ ನಾಚಿಕೆ ಆಗಲ್ವಾ. ಮಂತ್ರಿಗಳು ರಾಜೀನಾಮೆ ಕೊಡೋ ಬದಲು ಸಿಎಂ, ಡಿಸಿಎಂ ರಾಜೀನಾಮೆ ಕೊಟ್ಟು ತೊಲಗಿದರೆ ಬದಲಾವಣೆ ಕಾಣಬಹುದು. ಇವರೇ ಇದ್ದರೆ ಇವರು ಲೂಟಿ, ದರೋಡೆಗೆ ನಿಂತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.


Spread the love

LEAVE A REPLY

Please enter your comment!
Please enter your name here