ಇಷ್ಟು ದಿನ ನಿದ್ದೆ ಮಾಡೋ ರಾಮಯ್ಯ ಆಯ್ತು, ಈಗ ಮೂಖ ರಾಮಯ್ಯ ಆಗಿದ್ದಾರೆ: ಸಿಎಂ ವಿರುದ್ಧ ಆರ್. ಅಶೋಕ್ ವಾಗ್ಧಾಳಿ

0
Spread the love

ಹಾವೇರಿ: ಇಷ್ಟು ದಿನ ನಿದ್ದೆ ಮಾಡೋ ರಾಮಯ್ಯ ಆಯ್ತು. ಈಗ ಮೂಖ ರಾಮಯ್ಯ ಆಗಿದ್ದಾರೆ ಎಂದು ಪ್ರತಿಪಕ್ಷ ನಾಯಕ  ಆರ್. ಅಶೋಕ್ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಹಾವೇರಿ ನಗರದಲ್ಲಿ ಮಾತನಾಡಿದ ಅವರು,

Advertisement

ಮಾನ ಮರ್ಯಾದೆ ಇದ್ದರೆ ಸಿಎಂ ಸಿದ್ದರಾಮಯ್ಯ ಅವರು ಬಿ. ಆರ್ ಪಾಟೀಲ್ ಮೇಲೆ ಕ್ರಮ ತಗೊಬೇಕು, ಕಿತ್ತಾಕಬೇಕು, ಸಸ್ಪೆಂಡ್ ಮಾಡಬೇಕು, ಸಿಎಂಗೆ ಧಮ್ ಇದ್ದರೆ ಸಸ್ಪೆಂಡ್ ಮಾಡಿ, ಇಲ್ಲದಿದ್ದರೆ ಧಮ್ ಇಲ್ಲ ಅಂತ ಹೇಳಿ. ಸಿದ್ದರಾಮಯ್ಯ ಅವರನ್ನೇ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು.

ಧಮ್ ಇಲ್ಲ ತಾಕತ್ ಇಲ್ಲ. ಇಷ್ಟು ದಿನ ನಿದ್ದೆ ಮಾಡೋ ರಾಮಯ್ಯ ಆಯ್ತು. ಈಗ ಮೂಖ ರಾಮಯ್ಯ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು ವಸತಿ ಸಚಿವ ಜಮೀರ್ ಅಹ್ಮದ್ ಖಾತೆಯಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಆಗ್ತಿದೆ ಅಂತ ಹೇಳಿದ್ರೂ ಕ್ರಮ ಇಲ್ಲ. ಈಗಿರುವ ಸಿದ್ದರಾಮಯ್ಯ ಲೂಟಿ ಮಾಡೋರಿಗೆ ಗಾಡ್ ಫಾದರ್. ಕಾಸು ಮಾಡೋರಿಗೆ ರಕ್ಷಣೆ ನೀಡ್ತಾ ಇದ್ದಾರೆ ಎಂದು ಕಿಡಿಕಾರಿದರು.


Spread the love

LEAVE A REPLY

Please enter your comment!
Please enter your name here