ನವದೆಹಲಿ: ಇಸ್ರೇಲ್ನಲ್ಲಿ ಸಿಲುಕಿದ್ದ ಸುಮಾರು 161 ಜನರು ಇಂದು ವಿಶೇಷ ವಿಮಾನದಲ್ಲಿ ನವದೆಹಲಿ ತಲುಪಿದ್ದಾರೆ. ಮೊದಲು ಜೋರ್ಡಾನ್ಗೆ ಭೂಮಿ ಮೂಲಕ ಪ್ರಯಾಣಿಸಿ ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಬಂದಿದ್ದಾರೆ. ಹೌದು ಜೂನ್ 23ರಂದು ಆಪರೇಷನ್ ಸಿಂಧು ಕಾರ್ಯಾಚರಣೆ ಆರಂಭವಾಗಿದ್ದು,
ಮೊದಲ ತಂಡದಲ್ಲಿ 161 ಭಾರತೀಯರನ್ನು ಇಸ್ರೇಲ್ನಿಂದ ಕರೆತರಲಾಗಿದೆ. ಜೋರ್ಡಾನ್ನ ಅಮ್ಮನ್ನಿಂದ ನವದೆಹಲಿಗೆ ಭಾರತೀಯರನ್ನು ಹೊತ್ತ ವಿಮಾನ ಸುರಕ್ಷಿತವಾಗಿ ಬಂದಿಳಿದಿದೆ. ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆ ಸರ್ಕಾರದ ಪ್ರಮುಖ ಆದ್ಯತೆ ವಿದೇಶಾಂಗ ಇಲಾಖೆ ವಕ್ತಾರ ರಂಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಎಕ್ಸ್ ಜಾಲತಾಣ ಪೋಸ್ಟ್ ಮಾಡಿರುವ ಅವರು, ಜೂನ್ 23ರಿಂದ ಇಸ್ರೇಲ್ನಿಂದ ಭಾರತೀಯರನ್ನು ಕರೆತರುವ ‘ಆಪರೇಷನ್ ಸಿಂಧು‘ ಕಾರ್ಯಾಚರಣೆ ಆರಂಭಿಸಲಾಗಿದೆ. ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.