HomeLife Styleಊಟ ಮಾಡುವಾಗ ಪದೇ-ಪದೇ ಕೂದಲು ಸಿಗುತ್ತಾ!? ಹಾಗಿದ್ರೆ ದೋಷಗಳಿದೆ ಎಂದರ್ಥ!

ಊಟ ಮಾಡುವಾಗ ಪದೇ-ಪದೇ ಕೂದಲು ಸಿಗುತ್ತಾ!? ಹಾಗಿದ್ರೆ ದೋಷಗಳಿದೆ ಎಂದರ್ಥ!

For Dai;y Updates Join Our whatsapp Group

Spread the love

ಪ್ರತಿ ದಿನ ನಡೆಯುವ ಪ್ರತಿಯೊಂದು ವಿಷಯದ ಬಗ್ಗೆಯೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಊಟ ಮಾಡುವಾಗ ಕೈಕಾಲು ಏಕೆ ತೊಳೆಯಬೇಕು ಎನ್ನುವುದರಿಂದ ಹಿಡಿದು ಸ್ನಾನ ಹೇಗೆ ಮಾಡಬೇಕು ಎನ್ನುವವರೆಗೂ ಅನೇಕ ವಿಷ್ಯಗಳನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಮನೆ ಇರಲಿ ಇಲ್ಲ ಹೊಟೇಲ್ ಇರಲಿ, ಊಟಕ್ಕೆ ಕುಳಿತಾಗ ಅಥವಾ ತಿಂಡಿಗೆ ಕುಳಿತಾಗ ಆಹಾರದಲ್ಲಿ ಕೂದಲು ಬರುತ್ತದೆ. ಕೆಲವರು ಕೂದಲನ್ನು ಬದಿಗಿಟ್ಟು ಆಹಾರ ಸೇವನೆ ಮಾಡ್ತಾರೆ. ಮತ್ತೆ ಕೆಲವರಿಗೆ ಇದು ಹೇಸಿಗೆ ಎನ್ನಿಸುತ್ತದೆ. ಹಾಗಾಗಿ ಆ ಆಹಾರವನ್ನು ಸೇವನೆ ಮಾಡೋದಿಲ್ಲ. ಮತ್ತೆ ಕೆಲವರಿಗೆ ಜ್ಯೋತಿಷ್ಯದ ಜ್ಞಾನವಿರುತ್ತದೆ. ಆಹಾರದಲ್ಲಿ ಕೂದಲು ಸಿಕ್ಕಿದರೆ ಏನಾಗುತ್ತದೆ ಎಂಬುದು ತಿಳಿದಿರುವ ಕಾರಣ ಅವರು ಆತಂಕಕ್ಕೆ ಒಳಗಾಗ್ತಾರೆ. ಬಹುತೇಕ ಜನರಿಗೆ ಆಹಾರದಲ್ಲಿ ಕೂದಲು ಸಿಗೋದು ಯಾವುದರ ಸಂಕೇತ ಎಂಬುದು ತಿಳಿದಿಲ್ಲ.

ಊಟ ಮಾಡುವಾಗ ಅಥವಾ ಏನನ್ನಾದರೂ ತಿನ್ನುವಾಗ ನಿಮಗೂ ಅನೇಕ ಬಾರಿ ಕೂದಲು ಸಿಕ್ಕಿರಬಹುದು. ಶಾಸ್ತ್ರಗಳ ಪ್ರಕಾರ, ಕೂದಲು ಸಿಕ್ಕಿರುವ ಆಹಾರವನ್ನು ನಾವು ಎಂದಿಗೂ ಸೇವಿಸಬಾರದು. ಇದು ರಾಹು ಮತ್ತು ಪಿತೃ ದೋಷವನ್ನು ಸೂಚಿಸುತ್ತದೆ. ನಾವು ಯಾವ ರೀತಿಯಾದ ಆಹಾರವನ್ನು ಸೇವಿಸುತ್ತೇವೆಯೋ ಅದೇ ರೀತಿ ನಮ್ಮ ಮನಸ್ಸು ಕೂಡ ಇರುತ್ತದೆ ಎನ್ನುವ ನಂಬಿಕೆಯಿದೆ. ಏಕೆಂದರೆ ಆಹಾರವೇ ಜೀವನದ ಆಧಾರ. ಅದಕ್ಕಾಗಿಯೇ ಶಾಸ್ತ್ರಗಳಲ್ಲಿ ಆಹಾರ ಅಥವಾ ಧಾನ್ಯಗಳ ಮಹತ್ವವನ್ನು ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲದೆ, ಆಹಾರ ಸೇವನೆಗೆ ಸಂಬಂಧಿಸಿದ ಹಲವು ನಿಯಮಗಳನ್ನೂ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಆಹಾರದಲ್ಲಿ ಪದೇ ಪದೇ ಕೂದಲು ಕಾಣಿಸಿಕೊಳ್ಳುವುದರ ಅರ್ಥವೇನು ನೋಡಿ..

ನೀವು ಯಾವುದೇ ಆಹಾರ ಸೇವಿಸುವಾಗ ನಿಮಗೆ ಪದೇ ಪದೇ ಕೂದಲು ಬಾಯಿಗೆ ಸಿಕ್ಕಿದ್ದರೆ ಅಥವಾ ಕೂದಲು ಆಹಾರದಲ್ಲಿ ಕಾಣಿಸಿಕೊಂಡರೆ ಅಂತಹ ಆಹಾರವನ್ನು ನೀವು ಸೇವಿಸಲು ಹೋಗದಿರಿ. ಆಹಾರದಲ್ಲಿ ಪದೇ-ಪದೇ ಕೂದಲು ಕಾಣಿಸಿಕೊಳ್ಳುವುದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇದು ಮನೆಯಲ್ಲಿ ಅಥವಾ ಜೀವನದಲ್ಲಿ ಅಶುಭ ರಾಹುವಿನ ಪ್ರಭಾವವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಆರೋಗ್ಯ ಹಾಳಾಗುವುದು​:-

ನಿಮ್ಮ ಜಾತಕದಲ್ಲಿ ರಾಹು ಕೆಟ್ಟ ಸ್ಥಾನದಲ್ಲಿದ್ದರೆ ಅಥವಾ ನಿಮಗೆ ರಾಹು ದೋಷವಿದ್ದರೆ ಪದೇ-ಪದೇ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತೀರಿ. ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತೀರಿ. ಅನಗತ್ಯ ಖರ್ಚುಗಳು ಹೆಚ್ಚಾಗತೊಡಗುತ್ತದೆ. ಅನಾರೋಗ್ಯ ಅಥವಾ ಇತರ ಕಾರಣಗಳಿಂದಾಗಿ ಹಣವನ್ನು ಕೈಯಲ್ಲಿ ಉಳಿಯಲು ರಾಹು ಎಂದಿಗೂ ಅನುಮತಿಸುವುದಿಲ್ಲ.

ಇದು ಪಿತೃ ದೋಷದ ಸೂಚನೆ​:

ಆಹಾರದಲ್ಲಿ ಪದೇ ಪದೇ ಕೂದಲು ಸಿಗುವುದು ಕೇವಲ ರಾಹು ದೋಷಕ್ಕೆ ಮಾತ್ರ ಕಾರಣವಲ್ಲ. ಬದಲಾಗಿ ಇದರಿಂದ ಪಿತೃ ದೋಷ ಕೂಡ ಉಂಟಾಗುತ್ತದೆ. ನೀವು ತಿನ್ನಲು ಕುಳಿತಾಗ ಅಥವಾ ಕೈಯಲ್ಲಿ ಆಹಾರವನ್ನು ತೆಗೆದುಕೊಂಡಾಗ ಕೂದಲು ಕಾಣಿಸಿದರೆ ಅದು ಪಿತೃ ದೋಷದ ಸೂಚನೆಯಾಗಿದೆ. ಯಾವ ಮನೆಯಲ್ಲಿ ಪಿತೃ ದೋಷವಿರುತ್ತದೆಯೋ ಅಂತಹ ಮನೆಯಲ್ಲಿ ಆಹಾರವನ್ನು ಸೇವಿಸುವಾಗ ಪದೇ-ಪದೇ ಅಡಚಣೆಗಳು ಉಂಟಾಗುತ್ತದೆ.

ಅಡುಗೆ ಮನೆಯಲ್ಲಿ ಹೀಗಿರಿ:

ನಿಮಗೂ ಹೀಗಾದರೆ, ಅಂದರೆ ಊಟ ಮಾಡುವಾಗ ಕೂದಲು ಬಂದರೆ ತಕ್ಷಣ ರಾಹು ಮತ್ತು ಪಿತೃದೋಷಕ್ಕೆ ಸಂಬಂಧಿಸಿದ ಕ್ರಮಗಳನ್ನು ತೆಗೆದುಕೊಳ್ಳಿ. ಅಲ್ಲದೆ, ಊಟ ಮಾಡುವಾಗ ನಿಮ್ಮ ಕೂದಲನ್ನು ಕಟ್ಟಿಕೊಳ್ಳಿ ಮತ್ತು ಅಡುಗೆ ಮಾಡುವಾಗ ಶುಚಿತ್ವವನ್ನು ನೋಡಿಕೊಳ್ಳಿ. ಅಡುಗೆ ಮನೆಯಲ್ಲಿ ತಲೆ ಕೂದಲನ್ನು ಬಿಟ್ಟುಕೊಂಡು ಹೋಗಬೇಡಿ.

ಇವುಗಳು ಕೂಡ ಶುಭವಲ್ಲ​:

ಇದಲ್ಲದೇ ಊಟ ಬಡಿಸುವಾಗ ಪದೇ ಪದೇ ಕೈಯಿಂದ ಬೀಳುವುದು, ಆಹಾರ ಸೇವಿಸುವಾಗ ಉಂಟಾಗುವ ಯಾವುದೇ ರೀತಿಯ ಅಡಚಣೆ, ಆಹಾರ ಸೇವಿಸುವಾಗ ಯಾವುದೇ ಅಶುಭ ಸುದ್ದಿ ಬಂದರೆ ಅದು ಕೂಡ ಶುಭವಲ್ಲ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!