ಬೆಂಗಳೂರು:- ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಚೂಡಸಂದ್ರ ಬಳಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಜರುಗಿದೆ. ಆಂದ್ರಪ್ರದೇಶ ಮೂಲದ 23 ವರ್ಷದ ನಂದಿನಿ ಮೃತ ಯುವತಿ.
ಸ್ನೇಹಿತರ ಜೊತೆ ಕಟ್ಟಡದ ಮೇಲೆ ತೆರಳಿದ್ದ ವೇಳೆ ಆಯತಪ್ಪಿ ಬಿದ್ದು ಯುವತಿ ಸಾವನ್ನಪ್ಪಿದ್ದಾಳೆ. ನಿನ್ನೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನೂ ಯುವತಿ ನಗರದ ಶಾಪಿಂಗ್ ಮಾರ್ಟ್ ವೊಂದರಲ್ಲಿ ಕೆಲಸ ಮಾಡ್ತಿದ್ದಳು ಎಂದು ತಿಳಿದು ಬಂದಿದೆ.
ಸ್ನೇಹಿತರನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಸಾಕಷ್ಟು ವಿವರಗಳು ಗೊತ್ತಾಗಿದೆ. ಮೃತ ನಂದಿನಿಗೆ ಲವ್ ಫೇಲ್ಯೂರ್ ಆಗಿತ್ತು. 12 ವರ್ಷದ ಲವ್ ಮುರಿದು ಬಿದ್ದ ನೋವಿನಲ್ಲಿಯೇ ಆಕೆ ಇದ್ದಳು. ಹೀಗಾಗಿ ಅದೇ ಫೀಲಿಂಗ್ ನಲ್ಲಿ ಸ್ನೇಹಿತರ ಜೊತೆ ನಿರ್ಮಾಣ ಹಂತದ ಕಟ್ಟಡದ ಮೇಲೆ ಯುವತಿ ಮದ್ಯಪಾನ ಮಾಡಲು ತೆರಳಿದ್ದಳು. ನಿರ್ಮಾಣ ಹಂತದ ಕಟ್ಟಡದಲ್ಲಿ ತನ್ನ ಸ್ನೇಹಿತರ ಜೊತೆಗೂಡಿ ಆಕೆ ಕುಡಿಯಲು ಮುಂದಾಗಿದ್ದಳು.
ಈ ವೇಳೆ ಕುಡಿದು ರೀಲ್ಸ್ ಸ್ನೇಹಿತರು ರೀಲ್ಸ್ ಮಾಡಿದ್ದಾರೆ. ಈ ಹಂತದಲ್ಲಿ ನಂದಿನಿ ಕಟ್ಟಡದ ಮೇಲಿನಿಂದ ಕಾಲು ಜಾರಿ ಕೆಳಕ್ಕೆ ಬಿದ್ದು ಸಾವು ಕಂಡಿದ್ದಾಳೆ. ಘಟನೆ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.