ರಾಮನಗರ: ನನ್ನ ಮೂರು ಸೋಲುಗಳು ನನಗೆ ರಾಜಕೀಯವಾಗಿ ಪರಿಪಕ್ವತೆಯನ್ನು ಕಲಿಸಿವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು, ನಾನು ಪಲಾಯನವಾದಿಯಲ್ಲ,
Advertisement
ಯಾರೂ ಸಂದೇಹ ಇಟ್ಟುಕೊಳ್ಳಬೇಡಿ, ಸೋಲು ಗೆಲುವು ಸರ್ವೇಸಾಮಾನ್ಯ. ನನ್ನ ಮೂರು ಸೋಲುಗಳು ನನಗೆ ರಾಜಕೀಯವಾಗಿ ಪರಿಪಕ್ವತೆಯನ್ನು ಕಲಿಸಿವೆ ಎಂದು ಹೇಳಿದರು.
ಇನ್ನೂ ಕಾಂಗ್ರೆಸ್ನಿಂದ ಒಂದು ಚರಂಡಿಯನ್ನೂ ಸರಿಮಾಡಲಾಗಿಲ್ಲ, ಶಾಲೆ ಸೋರುತ್ತಿದ್ದರೂ ಸರಿಪಡಿಸಲಾಗಿಲ್ಲ, ಶಾಸಕರಿಗೆ ಅನುದಾನ ಕೊಡಲಾಗಿಲ್ಲ. ಇಂತಹವರು ರಾಜ್ಯವನ್ನು ಅಭಿವೃದ್ಧಿಪಡಿಸುತ್ತಾರೆಯೇ? ಎಂದು ಕಾಂಗ್ರೆಸ್ ಸರ್ಕಾರದ ವೈಫಲ್ಯದ ಬಗ್ಗೆ ಕಿಡಿಕಾರಿದರು.