ಮಂಡ್ಯ:- ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಮದಲ್ಲಿ ರಾತ್ರೋ ರಾತ್ರಿ ಬಂದ ಕಿಡಿಗೇಡಿಗಳು ಮನೆಯ ಮುಂದೆ ಬೆಳೆದಿದ್ದ ಗಂಧದ ಮರ ಕಡಿದು ಹೊತ್ತೊಯ್ದಿರುವ ಘಟನೆ ಜರುಗಿದೆ.
Advertisement
ಕಿರಂಗೂರು ಗ್ರಾಮದ ನಿವಾಸಿ ಚಂದ್ರಕಾಂತ ಎಂಬುವರ ಮನೆಯ ಮುಂದೆ ಗಂಧದ ಮರ ಬೆಳೆಯಲಾಗಿತ್ತು. ಇದನ್ನು ನೋಡಿದ್ದ ಮೂರ್ನಾಲ್ಕು ಮಂದಿ ಹೊಂಚು ಹಾಕಿ ಮುಸುಕುಧರಿಸಿ ಬಂದು ರಾತ್ರೋ ರಾತ್ರಿ ಮರಗಳನ್ನು ಕಡಿದು ಹೊತ್ತೊಯ್ದಿದ್ದಾರೆ. ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಮಾಲೀಕ ಚಂದ್ರಕಾಂತ್ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಅನ್ವಯ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.