ಬಿವಿವಿ ಶಾಲೆಯ ಶಾಲಾ ನಾಯಕರ ಪದಗ್ರಹಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಬಾಲ ವಿನಾಯಕ ವಿದ್ಯಾನಿಕೇತನ ಶಾಲೆಯಲ್ಲಿ ಶಾಲಾ ನಾಯಕರ ಪದಗ್ರಹಣ ಸಮಾರಂಭ ನೆರವೇರಿತು.

Advertisement

ಸಮಾರಂಭದ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಡಿಜಿಪಿ ಸಿ.ಹೆಚ್. ಪ್ರತಾಪರೆಡ್ಡಿ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಶಿಸ್ತಿನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಮೊಬೈಲ್ ಫೋನ್‌ನಲ್ಲಿ ಉತ್ತಮ ಅಂಶವನ್ನು ಮಾತ್ರ ಕಲಿಯಬೇಕು. ಪಾಲಕರು ಮತ್ತು ಶಿಕ್ಷಕರು ತಿಳಿಸಿಕೊಟ್ಟ ಮಾರ್ಗದಲ್ಲಿ ಮಕ್ಕಳು ನಡೆಯಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳು ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.

ಶಾಲೆಯ ನಿರ್ದೇಶಕ ವಿನಾಯಕ ಆರ್ ಮಾತನಾಡಿ, ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಲ್ಲಿರುವ ವಿವಿಧ ಪ್ರತಿಭೆಗಳಿಗೆ ಅನುಗುಣವಾಗಿ ಮಂತ್ರಿಮಂಡಲದ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ತಮಗೆಕೊಟ್ಟ ಕರ್ತವ್ಯಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿ ಎಂದರು.

ಶಾಲಾ ಸಂಸತ್‌ಗೆ ಆಯ್ಕೆಯಾದ ಶಾಲಾ ನಾಯಕ ಅಮೃತಗೌಡ ಗೌಡರ್, ನಾಯಕಿ ಐಮನ್ ಕೊಪ್ಪಳ, ಉಪನಾಯಕ ವೆಂಕಟೇಶ ಕಲ್ಮನಿ, ಉಪನಾಯಕಿ ದಿವ್ಯಾ ರಾಥೋಡ ಅವರಿಗೆ ಪ್ರಾಚಾರ್ಯ ವಿ.ಎಮ್. ಅಡ್ನೂರ ಪ್ರಮಾಣ ವಚನ ಬೋಧಿಸಿದರು. ಮಂತ್ರಿಮಂಡಲದ ಸದಸ್ಯರಿಗೆ ಶಾಲೆಯ ಸಂಯೋಜಕರಾದ ಯಾಸ್ಮಿನ್ ಮೊಮಿನ್ ಪ್ರಮಾಣ ವಚನ ಬೋಧಿಸಿದರು. ಪ್ಲೇ ಹೋಮ್‌ನ ಮುಖ್ಯಸ್ಥರಾದ ಗಂಗಾ, ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕಾರ್ಯದರ್ಶಿ ಎಸ್. ರವಿ, ಇ.ಎಲ್.ಸಿ ಮುಖ್ಯಸ್ಧರಾದ ಮಲ್ಲಿಕಾ ರವಿ, ಆಡಳಿತ ಮಂಡಳಿಯ ಸದಸ್ಯರಾದ ಗಾಯತ್ರಿ ವಿ ಮುಂತಾದವರು ಉಪಸ್ಥಿತರಿದ್ದರು.

ಶಾಲೆಯ ಪಂಡಿತ ಪುಟ್ಟರಾಜ ಮ್ಯೂಸಿಕ್ ಕ್ಲಬ್ ತಂಡದ ಪ್ರಕೃತಿ ಅಡವಿ ಹಾಗೂ ಸಂಗಡಿಗರು  ಪ್ರಾರ್ಥನಾ ಗೀತೆ ಹಾಡಿದರು. ನಕ್ಷತ್ರ ಹಿರೇಮಠ ಪರಿಚಯಿಸಿದರು. ಸಂಜನಾ ಗೌಡರ್ ಸ್ವಾಗತಿದರು. ಭೂಮಿಕಾ ಹೊಂಬಳ ಮತ್ತು ಸಮರ್ಥ ಸಾಮಂತ್ರಿ ನಿರೂಪಿಸಿದರು. ಸ್ವರೂಪ ಜಂಗ್ಲಿ ವಂದಿಸಿದರು. ಶ್ವೇತಾ ಯಮಗೌಳಿ, ಶಿವಂ ಬಾರಕೇರ ಬ್ಯಾಚ್ ವಿತರಣಾ ಸಮಾರಂಭವನ್ನು ನಡೆಸಿಕೊಟ್ಟರು.


Spread the love

LEAVE A REPLY

Please enter your comment!
Please enter your name here