ಮಾರಕಾಸ್ತ್ರ ಹಿಡಿದು ಮುಸುಕುಧಾರಿಗಳಿಂದ ಸರಣಿಗಳ್ಳತನ: ಸಾರ್ವಜನಿಕರಲ್ಲಿ ಆತಂಕ!

0
Spread the love

ಗದಗ:- ಕೈಯಲ್ಲಿ ಮಾರಕಾಸ್ತ್ರ ಹಿಡಿದು ಮುಸುಕುಧಾರಿಗಳಿಂದ ಸರಣಿಗಳ್ಳತನ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮನೆಮಾಡಿರುವ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಛಬ್ಬಿ, ಬೆಳ್ಳಟ್ಟಿ, ಬನ್ನಿಕೊಪ್ಪ, ಗ್ರಾಮಗಳಲ್ಲಿ ಜರುಗಿದೆ.

Advertisement

ಛಬ್ಬಿ ಗ್ರಾಮದಲ್ಲಿ ಕಳ್ಳರು ಕೈಯಲ್ಲಿ ಮಾರಕಾಸ್ತ್ರ ಹಿಡಿದು ಕೃಷ್ಣ ಲಮಾಣಿ ಎಂಬುವವರ ಮನೆ ಬೀಗ ಮುರಿದು ಒಳ ಹೊಕ್ಕು ಅಲ್ಮೇರಾದಲ್ಲಿದ್ದ 6000 ನಗದು ಕಳ್ಳತನ ಮಾಡಿದ್ದು, 50 ಗ್ರಾಂ ಬಂಗಾರದ ಆಭರಣಗಳನ್ನು ದೋಚಿ ಪರಾರಿ ಆಗಿದ್ದಾರೆ.

ಕೆಲವು ಮನೆಯಲ್ಲಿ ಕಳ್ಳತನ ಮುಂದಾಗಿದ್ದಾಗ ಸಿಸಿ ಟಿವಿ ನೋಡಿ ಕಳ್ಳರು ಓಡಿ ಹೋಗಿದ್ದಾರೆ. ಇವೆಲ್ಲಾ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿವೆ.

ಕಳ್ಳರ ಹಾವಳಿಗೆ ಸುತ್ತಮುತ್ತಲಿನ ಪ್ರದೇಶದ ಜನರು ಬೆಚ್ಚಿ ಬಿದ್ದಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಶಿರಹಟ್ಟಿ ಪಿಎಸ್ ಐ ಚನ್ನಯ್ಯ ದೇವೂರು ಭೇಟಿ ನೀಡಿ ಪರಿಶೀಲಿಸಿದರು. ಶ್ವಾನದಳ, ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದರು, ಶಿರಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.


Spread the love

LEAVE A REPLY

Please enter your comment!
Please enter your name here