ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ: ಸಚಿವ ಶಿವರಾಜ್ ತಂಗಡಗಿ

0
Spread the love

ಬಳ್ಳಾರಿ: ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ಐದು ವರ್ಷ ಇರುವ ವಿಚಾರ ಹೈಕಮಾಂಡ್​​ಗೆ ಬಿಟ್ಟದ್ದು.

Advertisement

ಬಿಜೆಪಿಯಂತೆ ನಮ್ಮಲ್ಲಿ ನಾಲ್ಕೈದು ಗುಂಪುಗಳಿಲ್ಲ. ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವ ನಾನಲ್ಲ. ಅದರ ಅವಶ್ಯಕತೆ ನನಗಿಲ್ಲ ಎಂದು ಹೇಳಿದ್ದಾರೆ. ಸಣ್ಣಪುಟ್ಟ ಹೇಳಿಕೆಯಿಂದ ಸಿಎಂ ಬದಲಾವಣೆ ಚರ್ಚೆಯಾಗಲ್ಲ. ಸಚಿವರು ಕೈಗೆ ಸಿಗಲ್ಲ ಎಂದು ಕೆಲವರ ಆರೋಪವಿದೆ.

ಇದಕ್ಕೆ ಸೂಚನೆ ಕೊಟ್ಟಿದ್ದಾರೆ. ನಾವು ಹೈಕಮಾಂಡ್​ ಹೇಳಿದ ಹಾಗೆ ಕೆಲಸ ಮಾಡ್ತೇವೆ. ಯಾರದ್ದೂ ದೂರುಗಳಿಲ್ಲ. ಕೇವಲ ಬಿ.ಆರ್.ಪಾಟೀಲ್ ಅವರ ಸಮಸ್ಯೆ ಇತ್ತು. ಅವರನ್ನು ಕರೆದು ಮಾತನಾಡಿದ್ದಾರೆ. ತಪ್ಪು ಮಾಡಿದ್ರೆ ತಿದ್ದಲು ನಮ್ಮಲ್ಲಿ ಹಿರಿಯರಿದ್ದಾರೆ, ತಿದ್ದುವವರು ಇದ್ದಾರೆ. ವಿರೋಧ ಪಕ್ಷದವರು ಮಾತನಾಡೋ ಕೆಲಸ ಮಾಡುತ್ತಾರೆ ಎಂದರು.

 


Spread the love

LEAVE A REPLY

Please enter your comment!
Please enter your name here