HomeDharwadಕೊರೊನಾ ಸೋಂಕಿಗೆ ಒಳಗಾದರೂ ಜನರ ಈ ಹರಿಕಾರ ಬಿಡುತ್ತಿಲ್ಲ ಮಾನವೀಯ ಸೇವೆ!

ಕೊರೊನಾ ಸೋಂಕಿಗೆ ಒಳಗಾದರೂ ಜನರ ಈ ಹರಿಕಾರ ಬಿಡುತ್ತಿಲ್ಲ ಮಾನವೀಯ ಸೇವೆ!

Spread the love

ರಾಜು ದಖನಿ, ಹುಬ್ಬಳ್ಳಿ

ಜನಾಶೀರ್ವಾದ ನನ್ನ ಮೇಲಿರುವಾಗ ಯಾವ ಮಹಾಮಾರಿಗೂ ಅಂಜದೆ ಜನ ಸೇವೆಗೆ ಮುಂದಾಗುತ್ತೇನೆ ಎಂದು ಪಾಲಿಕೆಯ ಮಾಜಿ ಮಹಾಪೌರ ಹಾಗೂ ಧಾರವಾಡ ಜಿಲ್ಲಾ ಗ್ರಾಮಿಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ್ ಪಾಟೀಲ್ ಹೇಳಿದ್ದಾರೆ. ಅವರು, ಕೊವೀಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೋಂಕು ಅವರ ಆರೋಗ್ಯವನ್ನು ಸ್ವಲ್ಪ ಏರು ಪೇರು ಮಾಡಿತ್ತು. ಆದರೆ, ಕಳೆದ ಎರಡು ದಿನಗಳಿಂದ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಹೊಂ ಐಸೋಲೆಷನ್ ಗೆ ಒಳಗಾಗಿದ್ದಾರೆ.

ವೈದ್ಯರ ಸೂಕ್ತ ಚಿಕಿತ್ಸೆ ಹಾಗೂ ಜನರ ಪ್ರೀತಿ ವಿಶ್ವಾಸವೇ ನನ್ನನ್ನು ಗುಣಮುಖವಾಗುವಂತೆ ಮಾಡಿದೆ. ಜನರ ಆ ಪ್ರೀತಿ ನನ್ನನ್ನು ಬೇಗ ಗುಣಮುಖನಾಗುವಂತೆ ಮಾಡಿದೆ ಎಂದು ಅನಿಲ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಕುಮಾರ್ ಅವಳಿ ನಗರದ ಸಿಕ್ಸ್ ಪ್ಯಾಕ್ ರಾಜಕಾರಣಿ ಹಾಗೂ ಖ್ಯಾತ ಸಂಗೀತಗಾರ ಎಂದೇ ಖ್ಯಾತಿ ಪಡೆದಿದ್ದಾರೆ. ಅಲ್ಲದೇ, ಅವರು ಕೆಲ ನಾಯಕರಂತೆ ಕೊರೊನಾ ಸಂದರ್ಭದಲ್ಲಿ ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಬದಲಾಗಿ ಜನ ಸೇವೆ ಮಾಡಲು ಪ್ರಾರಂಭಿಸಿದ್ದರು.

ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು, ಹಗಲಿರುಳು ಜನ ಸೇವೆ ಮಾಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಸಾಮಾಜಿಕ ಜವಾಬ್ದಾರಿ ಮೆರೆದು ಉಚಿತ ಆಂಬುಲೆನ್ಸ್, ಊಟದ ವ್ಯವಸ್ಥೆ ಹಾಗೂ ಆಹಾರ ಕಿಟ್ ಗಳನ್ನು ಬಡವರಿಗೆ ಹಂಚಿದ್ದಾರೆ. ಕೈಲಾದವರ ಬೆನ್ನಿಗೆ ನಿಂತು ಲಾಕ್ ಡೌನ್ ನಲ್ಲಿ ನಗುಮುಖದ ಬದುಕು ಸಾಗಿಸುವಂತೆ ಮಾಡಿದ್ದಾರೆ.

ಒಬ್ಬ ರಾಜಕಾರಣಿ ಮಾಡಬೇಕಾಗಿದ್ದ ಕಾರ್ಯಕ್ಕಿಂತಲೂ ಹೆಚ್ಚನದನ್ನು ಅವರು ಮಾಡಿದ್ದಾರೆ. ಒಬ್ಬ ನಿಜವಾದ ರಾಜಕಾರಣಿಯಂತೆ ಜನರ ನೋವಿಗೆ ಸ್ಪಂದಿಸಿದ್ದಾರೆ. ನಾನಿದ್ದೇನೆ ನೀವು ಭಯಪಡಬೇಡಿ ಎಂಬ ಅವರ ಮಾತುಗಳು ಹಲವಾರು ಬಡ ಕುಟುಂಬಗಳ ಆತ್ಮವಿಶ್ವಾಸ ಹೆಚ್ಚಿಸಿದೆ.

ಜನರ ಸೇವೆಗೆಗಾಗಿ ಅನಿಲ್ ಕುಮಾರ್, ಆಂಬುಲೆನ್ಸ್ ವಾಹನ ಇಟ್ಟಿದ್ದಾರೆ. ಯಾರೇ ಕರೆ ಮಾಡಲಿ ತತ್ ಕ್ಷಣವೇ ಅಲ್ಲಿಗೆ ಹೋಗಿ ನಿಲ್ಲುತ್ತಾರೆ. ಎಷ್ಟೇ ದೂರವಿರಲಿ, ಯಾವುದೇ ಆಸ್ಪತ್ರೆಯಿರಲಿ ಹಿಂದೆ ನಿಂತು ಅಗತ್ಯ ಸೇವೆ ಒದಿಗಿಸಿದ್ದಾರೆ. ಹೀಗೆ ನೂರಾರು ಜೀವಗಳನ್ನು ಅನಿಲ್ ಕುಮಾರ್ ಅವರ ಮಾನವೀಯ ಕಾರ್ಯ ಉಳಿಸಿದೆ ಎಂದರೆ ತಪ್ಪಾಗಲಾರದು ಎಂದು ಜನರು ಮೆಚ್ಚುಗೆ ಮಾತುಗಳನ್ನು ಹೇಳುತ್ತಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!