HomeGadag Newsಅಖಂಡ ಭಾರತ ನಿರ್ಮಾಣಕ್ಕೆ ಒಂದಾಗಿ

ಅಖಂಡ ಭಾರತ ನಿರ್ಮಾಣಕ್ಕೆ ಒಂದಾಗಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅಖಂಡ ಭಾರತದ ಸಂಕಲ್ಪಕ್ಕಾಗಿ ಹಿಂದೂಗಳ ಮನಸ್ಸುಗಳು ಒಗ್ಗೂಡಬೇಕು ಎಂದು ಬಿಜೆಪಿ ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಹೇಳಿದರು.

ಅವರು ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದ ಹತ್ತಿರ ಆ. 14ರ ಮಧ್ಯರಾತ್ರಿ ಶ್ರೀ ರಾಮಸೇನಾ ತಾಲೂಕು ಘಟಕದಿಂದ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಸ್ವಾತಂತ್ರ‍್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಜಯಂತಿ ಆಚರಣೆಯ ಸಂದರ್ಭದಲ್ಲಿ ಮಾತನಾಡಿದರು.

ಯುವ ಜನತೆ ದುಶ್ಚಟಗಳಿಂದ ದೂರವಿದ್ದು ದೇಶ, ಧರ್ಮದ ಬಗ್ಗೆ ಅಭಿಮಾನ-ಸ್ವಾಭಿಮಾನ ಹೊಂದಿ, ಆ ನಿಟ್ಟಿನಲ್ಲಿ ಜಾಗೃತಿ ಮೂಡಿದಾಗ ಮಾತ್ರ ಅಖಂಡ ಭಾರತ ನಿರ್ಮಾಣ ಸಾಧ್ಯ ಎಂದರು.

ಶ್ರೀರಾಮ ಸೇನಾ ತಾಲೂಕಾ ಅಧ್ಯಕ್ಷ ಈರಣ್ಣ ಪೂಜಾರ ಮಾತನಾಡಿ, ಅಖಂಡ ಭಾರತ ನಿರ್ಮಾಣಕ್ಕೆ ಸಮಸ್ತ ಹಿಂದೂಗಳ ಮನಸ್ಸುಗಳು ಒಂದಾಗಬೇಕು ಎಂದರು.

ಈ ವೇಳೆ ವಿಜಯಕುಮಾರ ಹತ್ತಿಕಾಳ, ನಿಂಗಪ್ಪ ಬನ್ನಿ, ಗಂಗಾಧರ ಮೆಣಸಿನಕಾಯಿ, ಮುತ್ತು ಕರ್ಜಕಣ್ಣವರ, ಮುರುಗೇಂದ್ರ ಸ್ವಾಮಿ ಹಿರೇಮಠ, ಸಂತೋಷ ಜಾವೂರ, ಪ್ರಾಣೇಶ ವ್ಯಾಪಾರಿ, ಅಮಿತ್ ಗುಡಿಗೇರಿ, ಹರೀಶ ಕಟ್ಟಿಮನಿ, ಕಿರಣ ಚಿಲ್ಲೂರಮಠ, ಹನಮಂತ ರಾಮಗೇರಿ, ಚಿನ್ನು ಹಾಳತೋಟದ, ಪ್ರವೀಣ ಬನ್ನಿಕೊಪ್ಪ, ಚಂದ್ರು ಕರ್ಜಕಣ್ಣವರ, ಆದೇಶ ಸವಣೂರ, ಹರೀಶ ಗೋಸಾವಿ, ಮುತ್ತು ಗೋಜನೂರ, ರಮೇಶ ಸಂಶಿ ಸೇರಿ ಕಾರ್ಯಕರ್ತರು ಇದ್ದರು. ಪಟ್ಟಣದ ಪರ್ವತ ಮಲ್ಲಯ್ಯ ದೇವಸ್ಥಾನದಲ್ಲಿಯೂ ಅಮರೇಶ ಗಾಂಜಿ ನೇತೃತ್ವದಲ್ಲಿ ಧ್ವಜಾರೋಹಣ ಮಾಡಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!