ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಮಾಜಿ ಕಾರ್ಪೊರೇಟರ್ ರೇಖಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಡ ರಾತ್ರಿ ಮತ್ತೆ ಮೂವರನ್ನು ಬಂಧಿಸಿದ್ದಾರೆ.
ಮೂವರ ಆರೋಪಿಗಳ ಹೆಸರು ಮತ್ತು ಬಂಧನವನ್ನು ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ. ಪುರುಷೋತಮ್, ಅಜಯ್, ಸ್ಟೀಫನ್ ಎಂಬ ಮೂವರು ಆರೋಪಿಗಳನ್ನು ಖಚಿತ ಮಾಹಿತಿಯ ಮೇರೆಗೆ ಬಂಧಿಸಿದ್ದಾರೆ.
ಪೊಲೀಸರ 3 ತಂಡಗಳು ನಗರದಲ್ಲಿ ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದವು. ತಡರಾತ್ರಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಗೆ ಮುಂದಿನಿಂದ ಚುಚ್ಚಿದ್ದು ಪೀಟರ್, ಹಿಂಬದಿಯಿಂದ ಸೂರ್ಯ ಅಟ್ಯಾಕ್ ಮಾಡಿದ್ದಾನೆ. ಸ್ಟೀಫನ್, ಅಜಯ್ ಕಾವಲು ಕಾಯ್ದಿದ್ದಾರೆ. ಸಿಸಿ ಕ್ಯಾಮರಾ ತಿರಿಗಿಸುವ ಕೆಲಸವನ್ನು ಪುರುಷೋತ್ತಮ್ ಮಾಡಿದ್ದಾನೆ.
ಇಡೀ ಅಟ್ಟ್ಯಾಕ್ ಪ್ಲಾನ್ ಮತ್ತು ಆರೋಪಿಗಳೆಲ್ಲರ ಜೊತೆ ಸ್ಟೀಫನ್ ವಹಿಸಿಕೊಂಡಿದ್ದ.
ಚುಚ್ಚುವ ಸಮಯದಲ್ಲಿ ಬಿಡಿಸಲು ಬಂದವರಿಗೆ ಕೊಡದಲ್ಲಿ ಹೊಡೆದವನು ಸೂರ್ಯ ಎನ್ನುವ ಮಾಹಿತಿ ಬಹಿರಂಗವಾಗಿದೆ. ಮೂವರು ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.