ಚಿತ್ರದುರ್ಗ:- ಹಿರಿಯೂರಿನ ಅರಳಿಕಟ್ಟೆ ಬಳಿ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿ ಕಾರಿನಲ್ಲಿದ್ದ ಯುವಕ ಸಜೀವ ದಹನಗೊಂಡ ಘಟನೆ ನಡೆದಿದೆ.
Advertisement
ಸಜೀವದಹನಗೊಂಡ ಯುವಕನನ್ನು ಅರಳಿಕಟ್ಟೆಯ ಸಿದ್ದೇಶ್ ಎಂದು ಗುರುತಿಸಲಾಗಿದೆ. ಅರಳಿಕಟ್ಟೆಗೆ ವಾಪಾಸ್ಸು ಹೋಗುವಾಗ ಈ ದುರ್ಘಟನೆ ನಡೆದಿದ್ದು, ನೆಕ್ಸಾನ್ ಕಾರು ಹೊತ್ತಿ ಉರಿದಿದೆ. ಬೆಂಕಿ ಹೊತ್ತಿ ಉರಿದ ಬಗ್ಗೆ ನಿಖರ ಕಾರಣ ತಿಳಿದಿಲ್ಲ. ಹೊತ್ತಿ ಉರಿಯುತ್ತಿರುವ ಕಾರಿನ ಬೆಂಕಿ ನಂದಿಸಲು ಗ್ರಾಮಸ್ಥರು ನೀರಾಕಿ ಪ್ರಯತ್ನಿಸಿದ್ದಾರೆ.
ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.