Accident Case: ಬೈಕ್ ಗೆ ಡಿಕ್ಕಿ ಹೊಡೆದ ಕಾರು; ಸವಾರ ಸ್ಥಳದಲ್ಲೇ ಸಾವು!

0
Spread the love

ಚಾಮರಾಜನಗರ:- ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಜರುಗಿದೆ.

Advertisement

29 ವರ್ಷದ ಮನು ಮೃತ ದುರ್ದೈವಿ. ಈತ ಹಂಗಳ ಗ್ರಾಮದ ಡೇರಿ ಉದ್ಯೋಗಿ ಆಗಿದ್ದ ಎನ್ನಲಾಗಿದೆ.
ಮನು ಹಂಗಳ ಗ್ರಾಮದ ಶನೇಶ್ವರ ದೇವಾಲಯದ ಎದುರು ಬೈಕಿನಲ್ಲಿ ತೆರಳುತ್ತಿದ್ದರು‌. ಈ ವೇಳೆ ವೇಗವಾಗಿ ಬರುತ್ತಿದ್ದ ಕಾರು, ಬೈಕ್ ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ತೀವ್ರ ಪೆಟ್ಟುಬಿದ್ದು ಮನು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಅಕ್ರೋಶಗೊಂಡ ಸ್ಥಳೀಯರಿಂದ ಕಾರು ಚಾಲಕನಿಗೆ ಧರ್ಮದೇಟು ಕೊಡಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಪಟ್ಟಣದ ಪೊಲೀಸರು ಆಗಮಿಸಿ ಪರಿಶೀಲಿಸಿದರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯ್ತು.


Spread the love

LEAVE A REPLY

Please enter your comment!
Please enter your name here