ಕಸಾಪ ತಾಲೂಕಾಧ್ಯಕ್ಷರ ಬದಲಾವಣೆಗೆ ಒತ್ತಾಯ

0
Spread the love

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಚಟುವಟಿಕೆಗಳಿಲ್ಲದೆ ಸಂಪೂರ್ಣವಾಗಿ ನಿಷ್ಕಿಯಗೊಂಡಿದೆ. ಈ ಹಿಂದೆ ದಿ. ಐ.ಎ. ರೇವಡಿಯವರು ಎಲ್ಲರನ್ನೊಳಗೊಂಡಂತೆ ಕ್ರಿಯಾಶೀಲವಾಗಿ ತಾಲೂಕಿನಲ್ಲಿ ಸಂಚರಿಸಿ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದರು.如今 ಪ್ರಸ್ತುತ ಅಧ್ಯಕ್ಷರ ಅವಧಿಯಲ್ಲಿ ಇದುವರೆಗೂ ಅಜೀವ ಸದಸ್ಯರ ಸಭೆ, ಕಾರ್ಯಕಾರಿ ಮಂಡಳಿ ಸದಸ್ಯರ ಸಭೆಗಳು ನಡೆಯದೆ ಕಾಟಾಚಾರಕ್ಕೆ ಇದ್ದಂತಾಗಿದೆ ಎಂದು ಕಸಾಪ ಅಜೀವ ಸದಸ್ಯ ಹಾಗೂ ತಾಲೂಕು ಮಾಜಿ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇವರ ಅಧಿಕಾರಾವಧಿಯಲ್ಲಿ ಯಾರಿಗೆಲ್ಲ ಅವಕಾಶ ನೀಡಲಾಗಿದೆ, ಯಾವ ಸಾಹಿತಿ-ಬರಹಗಾರರಿಗೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ ಎಂದು ತಿಳಿಸಲಿ. ಯಾವುದೇ ಚಟುವಟಿಕೆಗಳನ್ನು ಮಾಡದ ಅಧ್ಯಕ್ಷರನ್ನು ಯಥಾಸ್ಥಿತಿ ಮುಂದುವರೆಸುತ್ತಾ ಸಾಗಿರುವ ಕಸಾಪ ಜಿಲ್ಲಾಧ್ಯಕ್ಷರು ಕೂಡಲೇ ಈ ಬಗ್ಗೆ ಗಮನ ಹರಿಸಬೇಕು.

ಗಜೇಂದ್ರಗಡದಲ್ಲಿಯೇ ಗದಗ ಜಿಲ್ಲಾ 10ನೇ ಸಮ್ಮೇಳನ ಹಾಗೂ ಗಜೇಂದ್ರಗಡ ತಾಲೂಕು ಪ್ರಥಮ ಸಮ್ಮೇಳನ ನಡೆದು ವರ್ಷ ಕಳೆಯುತ್ತಾ ಬಂದರೂ ಇದುವರೆಗೂ ಲೆಕ್ಕಪತ್ರ ಮಂಡಿಸಿಲ್ಲ. ಆದ್ದರಿಂದ, ಕಸಾಪ ಜಿಲ್ಲಾಧ್ಯಕ್ಷರು ಇತ್ತ ಗಮನ ಹರಿಸಬೇಕೆಂದು ಒತ್ತಾಯಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here