
ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 2025-2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶರಣಬಸಪ್ಪ ಸಂಗಪ್ಪ ಗುಡಿಮನಿ, ಗೌರವ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಿರುವ ಚನ್ನವೀರಪ್ಪ ಪ್ರಭಣ್ಣ ಹುಣಸಿಕಟ್ಟಿ, ಉಪಾಧ್ಯಕ್ಷ ಜಯದೇವ ಎಂ. ಮೆಣಸಗಿ, ಪ್ರಕಾಶ ಎಸ್. ಉಗಲೋಟದ, ಎಸ್.ಎ. ಉಮಚಗಿ, ಸಹ ಗೌರವ ಕಾರ್ಯದರ್ಶಿ ರಾಘವೇಂದ್ರ ಎಸ್. ಕಾಲವಾದ, ಅಶೋಕ ಎಸ್. ಸಂಕಣ್ಣವರ ಹಾಗೂ ಕೋಶಾಧ್ಯಕ್ಷ ಅರವಿಂದ ಡಿ. ಕಾಮತ ಇವರಿಗೆ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಹರಿಹರ ಪೀಠದಿಂದ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಹರಿಹರ ಪೀಠದ ಜಿಲ್ಲಾಧ್ಯಕ್ಷ ವೀರಣ್ಣ ಅಂದಪ್ಪ ಕರಿಭಿಷ್ಠಿ, ರಾಜ್ಯ ಉಪಾಧ್ಯಕ್ಷ ಎಫ್.ವಿ. ಮರಿಗೌಡ್ರ, ಗೌರವ ಅಧ್ಯಕ್ಷ ಶಿವಾನಂದ ಪಲ್ಲೇದ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಕೆ. ಮಾಳಗೌಡ್ರ, ಬಸವರಾಜ ಜಕ್ಕನವರ, ಬಸವರಾಜ ಕರಿಮುಡಿ, ಬಸವರಾಜ ವಾಲಿ, ಈರಣ್ಣ ಬಾಳಿಕಾಯಿ, ವಿ.ಎಚ್. ದೇಸಾಯಿಗೌಡ್ರ, ಶಿವಾನಂದ ನಾಗರಾಳ ಮುಂತಾದವರಿದ್ದರು.

