ಮಂಡ್ಯ:- ಸಕ್ಕರೆನಾಡು ಮಂಡ್ಯದಲ್ಲಿ ಮನಕಲಕುವ ಘಟನೆ ನಡೆದಿದ್ದು, ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ.
Advertisement
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಬೂಕನಕೆರೆ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಬೂಕನಕೆರೆಯ ಗೌರಮ್ಮ(50), ನಿಂಗರಾಜನಾಯಕ್ (65)ಮೃತ ದಂಪತಿ. ಎಸ್, ಅನಾರೋಗ್ಯದಿಂದ ನಿನ್ನೆ ಗೌರಮ್ಮ ಸಾವಿಗೀಡಾಗಿದ್ದರು. ಪತ್ನಿಯ ಅಂತ್ಯಸಂಸ್ಕಾರ ಸಿದ್ಧತೆ ಮಾಡುತ್ತಿದ್ದಾಗ ಪತಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
46 ವರ್ಷ ಸುಖ ದಾಂಪತ್ಯ ನಡೆಸಿದ ದಂಪತಿಗಳು ಸುಖಾಂತ್ಯ ಕಂಡಿದ್ದಾರೆ. ಒಂದೇ ದಿನ ತಂದೆ -ತಾಯಿ ಕಳೆದುಕೊಂಡು ಇಬ್ಬರು ಪುತ್ರರು ತಬ್ಬಲಿಯಾಗಿದ್ದಾರೆ. ದಂಪತಿ ಸಾವಿನಿಂದ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.


