HomeGadag Newsಕನ್ನಡ ನಮ್ಮ ತಾಯಿ ಭಾಷೆ: ಹರ್ಷಲತಾ ದೇಶಪಾಂಡೆ

ಕನ್ನಡ ನಮ್ಮ ತಾಯಿ ಭಾಷೆ: ಹರ್ಷಲತಾ ದೇಶಪಾಂಡೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕನ್ನಡ ಭಾಷೆ ನಮ್ಮ ತಾಯಿ ಭಾಷೆ ಎಂದು ಹರ್ಷಲತಾ ದೇಶಪಾಂಡೆ ಹೇಳಿದರು.

ಅವರು ಪಟ್ಟಣದ ಕಾಳಿಕಾ ದೇವಸ್ಥಾನದ ಬಳಿಯ ಅಂಗನವಾಡಿ ನಂ. 142ರಲ್ಲಿ 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಕನ್ನಡ ಅಕ್ಷರ ಕಲಿಕೆಯ ಮೂಲ ಕೇಂದ್ರಗಳು ಅಂಗನವಾಡಿಗಳು. ಸರ್ಕಾರ ಇಂದು ಅಂಗನವಾಡಿ ಕೇಂದ್ರಗಳಿಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವ ಮೂಲಕ ಮಕ್ಕಳ ಕಲಿಕೆಗೆ ಸಹಾಯಕವಾಗಿದ್ದು, ಪೋಷಕರು ಮಕ್ಕಳನ್ನು ನಿತ್ಯ ಅಂಗನವಾಡಿಗಳಿಗೆ ಕಳಿಸಬೇಕು. ಮಕ್ಕಳಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ತಾಯಂದಿರು ಮಕ್ಕಳಿಗೆ ನಿತ್ಯವೂ ತಾಯಿ ಭಾಷೆಯಾದ ಕನ್ನಡವನ್ನು ಕಲಿಸುವ ಮೂಲಕ ಕನ್ನಡ ಭಾಷೆ ಉಳಿಸಿ ಬೆಳೆಸಬೇಕು ಎಂದರು.

ಮಕ್ಕಳ ಕಲಿಕೆಗಾಗಿ ಸಾಕಷ್ಟು ಮಹನೀಯರು ಚೇರ್‌, ಪೆನ್ಸಿಲ್, ಕಲಿಕಾ ಸಾಮಗ್ರಿಗಳನ್ನು ನೀಡಿದರು. ನಿವೃತ್ತಿ ಹೊಂದಿದ ಅಂಗನವಾಡಿ ಶಿಕ್ಷಕಿ ಎಸ್.ಎಂ. ಪಟ್ಟಣಶೆಟ್ಟಿ ಅವರನ್ನು, ಅಂಗನವಾಡಿಯಲ್ಲಿ ಕಲಿತು ಸರಕಾರಿ ಹುದ್ದೆ ಅಲಂಕರಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ಗೊಂವಿಂದ ಇಂಗಳಗಿ ವಹಿಸಿದ್ದರು. ಶ್ರೀಪಾದ ತಮ್ಮಣ್ಣವರ, ವಿ.ಡಿ. ದೇಸಾಯಿ, ಶಂಕರಪ್ಪ ತೆಂಬದಮನಿ, ಸೋಮಶೇಖರ ಬಟ್ಟೂರ, ಯೋಗರಾಜ ಹುಲಿ, ಜಿ.ಜಿ. ಗುಡಿ, ಇಸ್ಮಾಯಿಲ್ ಖಾಗದ, ವಿ.ಡಿ. ಸಿದ್ದನಗೌಡರ, ವಿದ್ಯಾ ಸೊರಟೂರ, ಹಸೀನಾ ಖಾಗದ, ನಿರ್ಮಲಾ ಬಟ್ಟೂರ, ಗೀತಾ ಕೋಳಿವಾಡ, ಸರೋಜಾ ಅರಳಿ, ಎಸ್.ಎಂ. ಪಟ್ಟಣಶೆಟ್ಟಿ, ಖುಷ್ಬು ಖಾಗದ ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!