ವಿಜಯಸಾಕ್ಷಿ ಸುದ್ದಿ, ಯಾದಗಿರಿ
Advertisement
ಬಸವರಾಜ ಬೊಮ್ಮಯಿ ಸರಕಾರ ಅಲ್ಪಾವಧಿಯದ್ದಾಗಿದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ ಖಂಡ್ರೆ ಭವಿಷ್ಯ ನುಡಿದಿದ್ದಾರೆ.

ಸುರಪೂರ ತಾಲೂಕಿನ ನೀಲಕಂಠರಾಯನ್ ಗಡ್ಡೆ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಎಂ ಬೊಮ್ಮಯಿಗೆ ಮುಕ್ತವಾಗಿ ಸರಕಾರ ನಡೆಸಲು ಬಿಜೆಪಿ ಅವಕಾಶ ಕೊಡುತ್ತದೆಯೇ ? ಎಂದು ಪ್ರಶ್ನಿಸಿದ ಅವರು, ಒಂದು ಕಡೆ ಕೇಶವ ಕೃಪಾ, ಮತ್ತೊಂದೆಡೆ ಕಾವೇರಿ, ಇನ್ನೊಂದು ಕಡೆ ಬಿಜೆಪಿ ಹೈ ಕಮಾಂಡ್, ಮತ್ತೊಂದು ಕಡೆ ಬಾಂಬೆ ಟಿಂ. ಈ ನಾಲ್ಕು ಶಕ್ತಿ ಕೆಂದ್ರಗಳು ಒಂದೊಂದು ಕಡೆ ಎಳೆದುಕೊಂಡು ಹೊದರೆ ಸಿ.ಎಂ. ಬೊಮ್ಮಯಿ ಸರಕಾರ ನಡೆಸಲು ಸಾಧ್ಯನಾ ? ಎಂದು ಪ್ರಶ್ನಿಸಿದರು.