ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ: ತಮ್ಮ ಆಧ್ಯಾತ್ಮಿಕ ಯೋಗ ಸಾಧನೆಯೊಂದಿಗೆ ಪ್ರಸಿದ್ಧಿಯಾಗಿರುವ ಇಲ್ಲಿಯ ಯೋಗಿರಾಜ ಮಹಾರಾಜರ 104ನೇ ವರ್ಷದ ಆರಾಧನೆಯು ನ. 18ರಿಂದ ಆರಂಭವಾಗಿದ್ದು, ನ. 20ರವರೆಗೂ ಐತಿಹಾಸಿಕ ವಿದ್ಯಾಶಂಕರ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಜರುಗಲಿದೆ.
ಮೂರು ದಿನಗಳವರೆಗೂ ಬೆಳಿಗ್ಗೆ 6 ಗಂಟೆಯಿಂದ ವಿದ್ಯಾಶಂಕರ ದೇವರಿಗೆ ಲಘು ರುದ್ರಾಭಿಷೇಕ, ಗಣಪತಿ ಸಹಸ್ರ ಮೋದಕ ಹೋಮ, ದೀಪೋತ್ಸವ, ಶೇಜಾರತಿ, ಮಂತ್ರ ಪುಷ್ಪ, ಅಷ್ಟಾವಧಾನ ಸೇವೆ, ಕಾಕಡಾರತಿ, ಅಲಂಕಾರ ಪೂಜಾ, ಭೀಮ ಭಿಕ್ಷೆ, ಅವಭೃತ ಸ್ನಾನ, ಬುತ್ತಿ ಪೂಜಾ, ಸತ್ಯ ನಾರಾಯಣ ಪೂಜಾ, ಮಹಾ ನೈವೇದ್ಯ, ಮಹಾ ಮಂಗಳಾರತಿ, ಮಹಾಪ್ರಸಾದ ಜರುಗಲಿದೆ.
ನ. 19ರಂದು ಮುಂಜಾನೆ ಗದಗ ಶ್ರೀಕರಿ ಭಜನಾ ಮಂಡಳಿಯಿಂದ ಭಜನೆ, ಹುಬ್ಬಳ್ಳಿಯ ಅರ್ಪಿತಾ ಜಹಗೀರದಾರ ಅವರಿಂದ ಭಕ್ತಿ ಸಂಗೀತ, ಬೆಂಗಳೂರು ಗೌರಿ ಅರುಣ ಕುಲಕರ್ಣಿ ಅವರಿಂದ ಭಕ್ತಿ ಸಂಗೀತ, ಸಂಜೆ ಶ್ರೀಕಾಂತ ಹೂಲಿ ಅವರಿಂದ ಭಕ್ತಿ ಸಂಗೀತ, ನ. 20ರಂದು ಮುಂಜಾನೆ ಗದಗ ಮಹಾಲಕ್ಷ್ಮೀ ಭಜನಾ ಮಂಡಳಿಯಿಂದ ಶಿಕ್ಷಕಿ ಭಾಗ್ಯಶ್ರೀ ಘಳಗಿ ಅವರು ರಚಿಸಿರುವ ಹೆಳವನಕಟ್ಟೆ ಗಿರಿಯಮ್ಮ ನಾಟಕ ಪ್ರದರ್ಶನ ಹಾಗೂ ಕೋಲಾಟ, ಭಜನಾ ಕಾರ್ಯಕ್ರಮಗಳು ಜರುಗುವವು. ನಂತರ ನರೇಗಲ್ಲ ವೆಂಕಟೇಶ ಕುಲಕರ್ಣಿ, ಮಾಲತಿ ಕುಲಕರ್ಣಿ, ಉಮೇಶ ಪಾಟೀಲ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ಜರುಗುವವು ಎಂದು ಯೋಗಿರಾಜ ಭಕ್ತಿ ಮಂಡಳಿಯ ಪ್ರಕಟಣೆ ತಿಳಿಸಿದೆ.


