HomeKarnataka Newsಸಂಸದ ಕರಡಿ ಸಂಗಣ್ಣ ಉಡಾಫೆ ಹೇಳಿಕೆ ಖಂಡನೀಯ: ಹಿಟ್ನಾಳ

ಸಂಸದ ಕರಡಿ ಸಂಗಣ್ಣ ಉಡಾಫೆ ಹೇಳಿಕೆ ಖಂಡನೀಯ: ಹಿಟ್ನಾಳ

Spread the love

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯ ಸಂಗಣ್ಣ ಕರಡಿ ಅವರು ಇತ್ತೀಚೆಗೆ ಒಂದು ಹೇಳಿಕೆ ನೀಡಿದ್ದನ್ನು ತಾವು ಗಮನಿಸಿರಬಹುದು , ತೈಲ ಹಾಗೂ ಅಡುಗೆ ಅನಿಲ ಬೆಲೆ ಏರಿಕೆಗೆ ಸಂಬಂಧಿಸಿದಂತೆ , ‘ ಅಪ್ಪನ ಸಾಲವನ್ನು ಮಗ ತೀರಿಸಬೇಕಲ್ವೆ ? ‘ ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ. ಇದು ಖಂಡನೀಯ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆಗೆ ಹಿಂದಿನ ಯುಪಿಎ ಸರಕಾರವೇ ಕಾರಣ ಎಂದು ಸಂಸದರು ಆರೋಪಿಸಿದ್ದಾರೆ . ಜನರು ಬೆಲೆ ಏರಿಕೆ ಭಾರದಲ್ಲಿ ನಲುಗಿ ಹೋಗುತ್ತಿರುವಾಗ , ಸಂಸದರ ಈ ಹೇಳಿಕೆ ಆಘಾತಕಾರಿಯಷ್ಟೇ ಅಲ್ಲ , ಸಾಕಷ್ಟು ತಪ್ಪು ಮಾಹಿತಿಯನ್ನು ಒಳಗೊಂಡಿದೆ ಎಂದು ಸಂಸದರ ಹೇಳಿಕೆಯನ್ನು ಖಂಡಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 2014 ರ ಮಾರ್ಚ್‌ವರೆಗೆ ತನ್ನ 67 ವರ್ಷಗಳ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಅದರ ನೇತೃತ್ವದ ಸರಕಾರಗಳು ಮಾಡಿದ ಒಟ್ಟು ಸಾಲ ರೂ .53.11 ಲಕ್ಷ ಕೋಟಿ , ಆದರೆ , ಜೂನ್ 2014 ರಿಂದ 2021 ರವರೆಗೆ ಬಿಜೆಪಿ ಸರಕಾರ ಮಾಡಿರುವ ಒಟ್ಟು ಸಾಲ 82.7 ಲಕ್ಷ ಕೋಟಿಗಳು . ಈ ಎರಡೂ ಪಕ್ಷಗಳ ನೇತೃತ್ವದ ಸರಕಾರ ಮಾಡಿರುವ ಒಟ್ಟು ಸಾಲ ರೂ .135.87 ಲಕ್ಷ ಕೋಟಿ ಅಗುತ್ತದೆ‌. ಬಿಜೆಪಿ ಸರಕಾರ ತಾನು ಮಾಡಿರುವ ಅಪಾರ ಸಾಲದ ಜೊತೆಗೆ , ಅದಾನಿ ಮುಂತಾದ ಕಾರ್ಪೊರೇಟ್ ಸಂಸ್ಥೆಗಳ ಅಂದಾಜು ರೂ .11 ಲಕ್ಷ ಕೋಟಿ ಸಾಲವನ್ನು ಎನ್‌ಪಿಎ ( ವಸೂಲಾಗದ ಸಾಲ – ಅನುತ್ಪಾದಕ ಸಾಲ ) ಎಂದು ಘೋಷಿಸಿದೆ . ಅಂದರೆ , ಕಾರ್ಪೊರೇಟ್ ಸಂಸ್ಥೆಗಳ ಈ ರೂ .11 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದಂತೆ . ಇದರ ಜೊತೆಗೆ ಕಳೆದ ನಾಲ್ಕು ವರ್ಷಗಳಲ್ಲಿ ರೂ .7 ಲಕ್ಷ ಕೋಟಿಗೂ ಹೆಚ್ಚಿನ ಮೊತ್ತವನ್ನು ಮನ್ನಾ ( ಲೈಟ್ ಆಫ್ ಮಾಡಿದೆ 3.ಅನುತ್ಪಾದಕ ಸಾಲ ಪದ ಇಪಿ ನರಕಾರ ಘೋಷಿಸಿರುವ ರೂ . 11 ಲಕ್ಷ ಕೋಟಿ ಮೊತ್ತದಲ್ಲಿ ಪ್ರಧಾನಿ ಆಗಿ ಅವರ ಪರಮಾಪ್ತ ಉದ್ಯಮಿ ಅದಾನಿಯ ಸಾಲದ ಪ್ರಮಾಣವೇ ರೂ .4.5 ಲಕ್ಷ ಕೋಟಿಯಷ್ಟಿದೆ ಎಂದು ಬಿಜೆಪಿಯವರೇ ಆಗಿರುವ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ . ಇಷ್ಟೊಂದು ಸಾಲ ಮಾಡಿದ್ದರೂ ಅದಾನಿ ಅವರ ಆದಾಯ 2016 ರಿಂದ ಗುಣವಾಗುತ್ತಿರುವುದು ಹೇಗೆ ? ಇಷ್ಟೊಂದು ಸಾಲ ಇರುವ ವ್ಯಕ್ತಿಯ ಸಾಲವನ್ನು ಮನ್ನಾ ಮಾಡಿದ್ದಾದರೂ ಏಕೆ? ಈ ಅಂಶ ಸನ್ಮಾನ್ಯ ಸಂಸದ ಸಂಗಣ್ಣ ಕರಡಿ ಅವರಿಗೆ ಗೊತ್ತಿಲ್ಲವೆ? ಎಂದು ಹಿಟ್ನಾಳ ಪ್ರಶ್ನಿಸಿದರು.

2013-14ರಲ್ಲಿ ಭಾರತದ ರಷ್ಟು ಆದಾಯ ರೂ .25.52 ಲಕ್ಷ ಕೋಟಿ ಇದ್ದದ್ದು ಮೋದಿ ಕಾಲದ 2019-2020ರ ವೇಳೆಗೆ ರೂ .23.02 ಲಕ್ಷ ಕೋಟಿಗೆ ಇಳಿದಿದೆ . ಹಾಗಾದರೆ ” ಮೇಕ್ ಇನ್ ಇಂಡಿಯಾ ” ಎಲ್ಲಿ ಹೋಯ್ತು? ದೇಶದ ಜನ ಕಳೆದ 70 ವರ್ಷಗಳಲ್ಲಿ ಸೃಷ್ಟಿಸಿದ 6 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಮೋದಿಯವರು ಈ ದೇಶದ ಜನರ ಅನುಮತಿ , ಒಪ್ಪಿಗೆ ಪಡೆದಿದ್ದಾರಾ ? ಅಸ್ತಿ ನಗದೀಕರಣ ಹೆಸರಿನಲ್ಲಿ ಭಾರತದ ರಸ್ತೆಗಳು , ಏರ್‌ಪೋರ್ಟ್‌ಗಳು , ರೈಲು ನಿಲ್ದಾಣಗಳು ಸೇರಿ ಪ್ರತಿಯೊಂದನ್ನೂ ಖಾಸಗಿಯವರಿಗೆ ಒಪ್ಪಿಸಲಾಗುತ್ತಿದೆ . ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಮೋದಿ ಅವರು ಮಾರಾಟ ಮಾಡುತ್ತಿರುವುದು ಯಾರು ಮಾಡಿಟ್ಟ ಆಸ್ತಿಯನ್ನು ? ಇದಕ್ಕೆ ಸಂಸದ ಸಂಗಣ್ಣ ಕರಡಿ ಏನು ಹೇಳುತ್ತಾರೆ? ಎಂದು ಶಾಸಕರು ಕಿಡಿ ಕಾರಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಮನೆಗಳ ಆಸ್ತಿ ತೆರಿಗೆ ವಿಪರೀತ ಹೆಚ್ಚಾಗಿರುವುದು ಮಾತ್ರವಲ್ಲದೆ ಖಾಲಿ ಜಾಗಗಳಿಗೂ ತೆರಿಗೆ ವಿಧಿಸುತ್ತಿದ್ದಾರೆ . ಕಬ್ಬಿಣ , ಸಿಮೆಂಟ್ ಸೇರಿ ದಿನನಿತ್ಯ ಬಳಕೆಯ ಎಲ್ಲಾ ಸ್ಥಳ ಬೆಲೆಯೂ ಆಕಾಶ ಮುಟ್ಟುತ್ತಿದೆ . ಅಚ್ಛೆ ದಿನ್ ಅಂದರೆ ಇದೇನಾ? ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ಜನರ ಬದುಕು ನರಕವಾಗಿದೆ . ವಿದ್ಯುಚ್ಛಕ್ತಿ ಬಿಲ್ ಶೇ , 30 ರಷ್ಟು ಹೆಚ್ಚಾಗಿದೆ . ಪೆಟ್ರೋಲ್ , ಡೀಸೆಲ್ , ಅಡುಗೆ ಅನಿಲದ ಬೆಲೆ ಏರಿಕೆಯಂತೂ ನಿರಂತರವಾಗಿ ಸಾಗಿದೆ . ಬಹುಶಃ ಮೋದಿ ಅವರು ಪ್ರಧಾನಿ ಆಗಿರುವವರೆಗೂ ಈ ಬೆಳೆಗೆಸಿ ಇಳಿಯುವಂತೆ ಕಾಣುತ್ತಿಲ್ಲ . ಹೇಳುತ್ತ ಹೋದರೆ ಬಿಜೆಪಿ ಸರಕಾರ ಬಿನದಿಗೆ ಮಾಡಿರುವ ಹಾಗೂ ಮಾಡುತ್ತಿರುವ ದ್ರೋಹಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ . ಅಪ್ಪ ಮಾಡಿಟ್ಟ ಕಾಲವನ್ನು ಮಗ ತೀರಿಸಬೇಕಲ್ವೆ ? ಎಂದು ಸಂಸದ ಸಂಗಣ್ಣ ಕರಡಿ ಉಡಾಫೆಯಿಂದ ಪ್ರಶ್ನಿಸಿದ್ದಾರೆ , ಅಂದರೆ , ಕಾಂಗ್ರೆಸ್ ಅಪ್ಪ ಅದಂತಾಯ್ತು? ಎಂದು ಅವರು ಸಂಸದರ ಹೇಳಿಕೆಗೆ ಟಾಂಗ್ ನೀಡಿದರು.

ಬಿಜೆಪಿಯಂತಹ ಜನವಿರೋಧಿ , ಪ್ರಗತಿವಿರೋಧಿ ಮಗನನ್ನು ಹೊಂದಲು ಕಾಂಗ್ರೆಸ್ ಎಂದಿಗೂ ಬಯಸುವುದಿಲ್ಲ , ಅಂಕಿಅಂಶಗಳು ಸುಳ್ಳು ಹೇಳುವುದಿಲ್ಲ , ಖುದ್ದು ಕೇಂದ್ರ ಸರಕಾರವೇ ಬಿಡುಗಡೆ ಮಾಡಿರುವ ಅಂಕಿಅಂಶಗಳು ಸತ್ಯವನ್ನು ಸ್ಪಷ್ಟವಾಗಿ ಹೇಳುತ್ತಿವೆ , ಜನವಿರೋಧಿ ಸರಕಾರ ಯಾರದು ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ , ದೇಶಭಕ್ತಿಯ ಹೆಸರಿನಲ್ಲಿ , ಅತ್ಮನಿರ್ಭರ ಹೆಸರಿನಲ್ಲಿ ಜನರ ಬದುಕನ್ನು ದುರ್ಭರವಾಗಿಸಿರುವ ಬಿಜೆಪಿ ಸರಕಾರ , ಕೊರೊನಾದಂತಹ ಸಂಕಷ್ಟ ಕಾಲದಲ್ಲಿಯೂ ಜನರ ರಕ್ತ ಹೀರುವುದನ್ನು ಬಿಟ್ಟಿಲ್ಲ . ತರಿಗೆ ಹೆಸರಿನಲ್ಲಿ , ಸ್ವಾವಲಂಬಿ ಭಾರತದ ಹೆಸರಿನಲ್ಲಿ ಜನರ ಜೇಬಿನಿಂದ ದುಡ್ಡು ಕಿತ್ತುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಮಾಡಿಲ್ಲ . ಅಂತಹ ನೀಚ ಕೆಲಸ ಮಾಡುತ್ತಿರುವುದು ಬಿಜೆಪಿ ಸರಕಾರ , ವಿದ್ಯುತ್ , ನೀರು , ಇಂಧನ ಆಹಾರ ಮುಂತಾದವು ಜನರ ಮೂಲಭೂತ ಅವಶ್ಯಕತೆಗಳೇ ಹೊರತು ಆಡಂಬರವಲ್ಲ . ಇಂತಹ ಕನಿಷ್ಠ ಸೌಕರ್ಯಗಳಿಗೂ ಅಪಾರ ತೆರಿಗೆ ಪಡೆಯುತ್ತಿರುವುದು ಜನವಿರೋಧಿ ಕೆಲಸವಾಗುತ್ತದೆ . ಅಂತಹ ನೀಚ ಕೆಲಸವನ್ನು ಬಿಜೆಪಿ ಮಾಡುತ್ತ ಬಂದಿದೆ . ಆದರೆ , ತಮ್ಮ ಪಾಪದ ಕೆಲಸವನ್ನು ಕಾಂಗ್ರೆಸ್ ಪಕ್ಷದ ತಲೆಗೆ ಕಟ್ಟುವ ದುರ್ಬುದ್ಧಿ ತೋರಿಸುತ್ತಿದೆ ಎಂದು ಅವರು ದೂರಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜುಲ್ಲು ಖಾದ್ರಿ, ಎಸ್. ಬಿ.ನಾಗರಳ್ಳಿ, ಪ್ರಸನ್ನ ಗಡಾದ, ರವಿ ಕುರಗೋಡ ಮತ್ತಿತರರು ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!