ವಿಜಯಸಾಕ್ಷಿ ಸುದ್ದಿ, ಗದಗ
Advertisement
ನಗರದ ವಿಜಯ ಕಲಾ ಮಂದಿರ ರಸ್ತೆಯಲ್ಲಿ ಮೊಬೈಲ್ ಕಳ್ಳನಿಗೆ ಮಹಿಳೆಯೊಬ್ಬರು
ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ
ಘಟನೆ ನಡೆದಿದೆ.
ಎರಡು ದಿನಗಳ ಹಿಂದೆ ಹೋಟೆಲ್ ಯಜಮಾನಿ ಬಳಿ ಮಹಿಳೆ ಬಂದಿದ್ದಾಗ ಆ ಮಹಿಳೆ ಬಳಿ ಬಂದ ಯುವಕ ಅರ್ಜೆಂಟಾಗಿ ಕಾಲ್ ಮಾಡುವುದಿದೆ ಎಂದು ಹೇಳಿ ಮೊಬೈಲ್ ಪಡೆದು ಎಸ್ಕೇಪ್ ಆಗಿದ್ದ.
ಭಾನುವಾರ ಬಜಾರ್ ನ ಮೊಬೈಲ್ ಅಂಗಡಿ ಬಳಿ ದಿಢೀರ್ ಪ್ರತ್ಯಕ್ಷನಾದ ಕಳ್ಳನ ಗುರುತು ಹಿಡಿದ ಮಹಿಳೆ ಅಂಗಿಯ ಕಾಲರ್ ಹಿಡಿದು
ಕಪಾಳಮೋಕ್ಷ ಮಾಡಿದ್ದಾರೆ. ಸ್ಥಳದಲ್ಲಿದ್ದ ಜನರು ಸೇರಿ ಕಳ್ಳನಿಗೆ ಒಂದೆರಡು ಏಟು ಬಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳ್ಳ ಮೊಬೈಲ್ ಅಷ್ಟೆ ಅಲ್ಲದೆ ಬೈಕ್ ಗಳ ನ್ನೂ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ಹೇಳುತ್ತಿದ್ದಾರೆ.