ನವಲಗುಂದ : ಕರ್ನಾಟಕ ರಾಜ್ಯ ನದಾಫ ಪಿಂಜಾರ ಸಂಘದ ಮಾಜಿ ರಾಜ್ಯಾಧ್ಯಕ್ಷ
ಎಮ್. ಎಮ್. ನದಾಫ ಇವರು ಸೋಮವಾರ 13-9-2021 ಮಧ್ಯಾಹ್ನ ಹೃಧಾಯಘಾತದಿಂದ ದಾವಣಗೆರೆಯಲ್ಲಿ ಸ್ವರ್ಗವಾಸಿಗಳಾದರು.
ಇವರ ನಿಧನಕ್ಕೆ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಶ್ರೀದಾವಲ ಮಲಿಕ್ ಅನಾಥಾಶ್ರಮದ ಶ್ರೀ ದಾವಲಮಲಿಕ್ ಶ್ರೀಗಳು ಸಂತಾಪ ಸೂಚಿಸಿದ್ದಾರೆ.
ವೃತ್ತಿಯಲ್ಲಿ ಪ್ರೋಫೆಸ್ಸರ ಆಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೂಂದಿದ್ದ ಇವರು ಮೂಲತಃ ಗದಗ ಜಿಲ್ಲೆಯವರು. ಇವರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿಕೂಂಡಿದ್ದರು.
ಶ್ರೀಯುತರಾದ ಜನಾಬ್ ಎಂ ಎಂ ನದಾಫ್ ಇವರು ಕರ್ನಾಟಕ ರಾಜ್ಯ ಪಿಂಜಾರ್ ನದಾಫ್ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ದಿ. ಎಚ್ ಇಬ್ರಾಹಿಂಸಾಬ್ ಇವರ ನಿಕಟವರ್ತಿಗಳಲ್ಲಿ ಒಬ್ಬರಾಗಿದ್ದವರು.
ದಿ. ಎಚ್ ಇಬ್ರಾಹಿಂ ನಂತರ KRNP ಸಂಘದ ಐದು ವರ್ಷ ರಾಜಾಧ್ಯಕ್ಷರಾಗಿ ಸಂಘವನ್ನು ಮುನ್ನಡೆಸಿ ಸಮಾಜ ಸೇವಕರಾಗಿ ಸೇವೆ ಸಲ್ಲಿಸಿದ ಮುತ್ಸದ್ದಿಯಾಗಿದ್ದರು.
ಮೃತರ ಅಂತ್ಶಕ್ರಿಯ ಇಂದು 14/09/2021ರಂದು ಮುಂಜಾನೆ 11-00 ಘಂಟೆಗೆ ತೇಜಸ್ವಿನಗರ ಮಕ್ಕಾ ಮಸೀದದಲ್ಲಿ ಜನಾಜಾ ನಮಾಜ ಇರುತ್ತದೆ.
ಅಲ್ಲಾಹು ಮೃತರ ಸ್ವರ್ಗ ಪ್ರಾಪ್ತಿ ಮಾಡಲಿ. ಮೃತರ ಕುಟುಂಬಕ್ಕೆ ನೋವುನ್ನು ಭರಿಸುವ ಶಕ್ತಿ ಸಹ ನೀಡಲಿ ಎಂದು ಶ್ರೀ ದಾವಲ ಮಲಿಕ್ ಶ್ರೀಗಳು ಸಂತಾಪ ಸೂಚಿಸಿದ್ದಾರೆ.