ವಿಜಯಸಾಕ್ಷಿ ಸುದ್ದಿ, ಕಲಬುರಗಿ
ಆರ್ ಎಸ್ ಎಸ್ ವಿರುದ್ಧ ಮಾತಾಡಿದ್ರೆ ಬೆಂಕಿ ಜೊತೆ ಸರಸ ಆಡಿದಂಗೆ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ,
ಮಾಜಿ ಸಿಎಂ ಸಿದ್ರಾಮಯ್ಯ ತಿರುಗೇಟು ನೀಡಿದ್ದು, ನಾನು 20 ವರ್ಷದಿಂದ ಮಾತಾಡ್ತಾನೆ ಇದೀನಿ ಏನಾಗಿದೆ. ಬೆಂಕಿನೂ ಇಲ್ಲ, ಏನೂ ಇಲ್ಲ ಸುಮ್ನೆ ನಡೀರಿ ಎಂದರು.
ಕಲಬುರಗಿಯಲ್ಲಿ ಮಾತನಾಡಿದ ಅವರು, ನಾವೇನು ಬೈ ಎಲೆಕ್ಷನ್ ಬರಬೇಕು ಎಂದು ಬಯಸಿರಲಿಲ್ಲ. ಆದರೂ ಎರಡೂ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕುಮಾರಸ್ವಾಮಿ ಕೊಡುವ ಹೇಳಿಕೆಗೆ ನಾನು ರಿಯಾಕ್ಟ್ ಮಾಡಲ್ಲ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.