ವಿಜಯಸಾಕ್ಷಿ ಸುದ್ದಿ, ಹಾವೇರಿ
ಹಾವೇರಿಯಲ್ಲಿ ಮಂಗಳವಾರ ರಾತ್ರಿ ಗುಡುಗು ಸಹಿತ ಭಾರಿ ಮಳೆಯಾಗಿದೆ. ಗುತ್ತಲ ಸಮೀಪದ ನೆಗಳೂರು ಗ್ರಾಮದಲ್ಲಿ ತಡರಾತ್ರಿ ಸಿಡಿಲು ಬಡಿದು ಗ್ರಾಮದೇವಿ ದ್ಯಾಮವ್ವ ದೇವಿ ದೇವಸ್ಥಾನದ ಗೋಪುರ ಭಗ್ನಗೊಂಡಿದೆ. ಇದರಿಂದ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಮೆಡ್ಲೇರಿ ಬೀರಪ್ಪ ದೇವರ ಪವಾಡ
ಧೋ… ಎಂದು ಸುರಿಯುತ್ತಿರುವ ಮಳೆಯಲ್ಲೂ ಕಟ್ಟಿಗೆಯ ಒಲೆ ಹೊತ್ತಿ ಉರಿಯುದನ್ನು ಕಂಡು ಜನರು ಮೂಕವಿಸ್ಮಿತರಾದರು. ಮೆಡ್ಲೇರಿ ಬೀರಪ್ಪ ದೇವರ ಪವಾಡ ಎಂದೇ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ರಾಣೆಬೆನ್ನೂರು ತಾಲೂಕಿನ ಸುಕ್ಷೇತ್ರ ಮೆಡ್ಲೇರಿಯಲ್ಲೂ ಧಾರಾಕಾರ ಮಳೆಯಾಗಿದೆ. ಆದರೆ, ಬೀರಪ್ಪ ದೇವರಿಗೆ ಪ್ರಸಾದ ಮಾಡಲು ದೇವಸ್ಥಾನದ ಮುಂದೆ ಹಚ್ಚಿದ ಸೌದೆ ಒಲೆ ಮಳೆಯ ನಡುವೆಯೂ ಹಾಗೆಯೇ ಉರಿಯುತ್ತಿತ್ತು. ಹೀಗಾಗಿ, ಇದೊಂದು ಪವಾಡವೆಂದು ಭಕ್ತರು ನಂಬಿದ್ದಾರೆ.