HomeGadag Newsಡಾ. ಅಂಬೇಡ್ಕರರ ಪುತ್ಥಳಿ ಅನಾವರಣ ಕಾರ್ಯವನ್ನು ನಾಡ ಹಬ್ಬದಂತೆ ಆಚರಿಸಲು ನಿರ್ಧಾರ

ಡಾ. ಅಂಬೇಡ್ಕರರ ಪುತ್ಥಳಿ ಅನಾವರಣ ಕಾರ್ಯವನ್ನು ನಾಡ ಹಬ್ಬದಂತೆ ಆಚರಿಸಲು ನಿರ್ಧಾರ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಡಂಬಳ: ಡಂಬಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ ಅವರ ಪುತ್ಥಳಿ ಅನಾವರಣ ಮಾಡಬೇಕು ಎನ್ನುವ ಹಲವು ವರ್ಷಗಳ ದಲಿತ ಸಮುದಾಯದ ಮತ್ತು ಅಂಬೇಡ್ಕರ ಅಭಿಮಾನಿಗಳ ಕನಸು ಶೀಘ್ರದಲ್ಲೇ ನನಸಾಗುವ ಕಾಲ ಕೂಡಿ ಬಂದಿದ್ದು, ಡಂಬಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಶನಿವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಮುಖಂಡರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಜನವರಿ ಅಥವಾ ಮುಂದಿನ ತಿಂಗಳ ಫೆಬ್ರುವರಿ ಮೂರನೇ ವಾರದೊಳಗೆ ಅಂಬೇಡ್ಕರ ಪುತ್ಥಳಿ ನಿರ್ಮಾಣ ಮಾಡುವ ಕುರಿತು ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನಿರ್ಣಯದಂತೆ ಎಲ್ಲಾ ಸದಸ್ಯರನ್ನೊಳಗೊಂಡು ಸಚಿವರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಹಲವು ಗಣ್ಯರನ್ನು ಆಹ್ವಾನಿಸುವ ಕುರಿತು ಚರ್ಚೆಗಳು ನಡೆದವು. ವಿಶೇಷವಾಗಿ ಕಾರ್ಯಕ್ರಮ ಮಾಡುವ ಸ್ಥಳ, ಕುಂಭ ಮೆರವಣಿಗೆ, ಊಟದ ವ್ಯವಸ್ಥೆ, ನೀರು ನಿರ್ವಹಣೆ, ವೇದಿಕೆಯ ವ್ಯವಸ್ಥೆ, ಖರ್ಚು-ವೆಚ್ಚ ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಸಭೆಯಲ್ಲಿ ಚರ್ಚೆ ಮಾಡಲಾಯಿತು.

ಸಭೆಯಲ್ಲಿ ಮುಖಂಡರಾದ ದೇವಪ್ಪ ತಳಗೇರಿ, ಗ್ರಾ.ಪಂ ಸದಸ್ಯ ರಾಕೇಶ ಅಡವಿ, ಮಾರುತಿ ಬಿಸನಹಳ್ಳಿ, ಮುಖಂಡ ಹನಮಪ್ಪ ಶಿವಪ್ಪ ಹಾದಿಮನಿ, ಕೃಷ್ಣ ಕಟ್ಟೆಣ್ಣವರ, ಉಪನ್ಯಾಸಕರಾದ ಮಂಜುನಾಥ ಬಿಸನಹಳ್ಳಿ, ಗವಿಸಿದ್ದಪ್ಪ ಹಾದಿಮನಿ, ಲಕ್ಷ್ಮಣ ದೊಡ್ಡಮನಿ, ನಾಗಪ್ಪ ಕೊರವರ, ವಿಜಯಕುಮಾರ ಹಾದಿಮನಿ, ವೆಂಕಟೇಶ ತಳವಾರ, ಆದಿತ್ಯ ಗದಗಿನ, ಅಶೋಕ ತಳಗೇರಿ, ದೇವಿಂದ್ರಪ್ಪ ಪೂಜಾರ, ವಿನಾಯಕ ಕಟ್ಟೆಣ್ಣವರ, ಕುಮಾರ ಗೌಡಣ್ಣವರ, ಸುರೇಶ ದೊಡ್ಡಮನಿ, ಹನಮಪ್ಪ ಕೊರವರ, ಷಣ್ಮುಖಪ್ಪ ಒಂಟೆಲಭೋವಿ, ಯಮನಪ್ಪ ಹಾನಿ, ಗೋಪಾಲ ಕದಡಿ, ಫಕ್ಕಿರಪ್ಪ ಆನಿ, ಲೆಂಕೆಪ್ಪ ಕದಡಿ, ಚೇತನ ಸಿದ್ದಣ್ಣವರ, ಶಂಖರಲಿಂಗಪ್ಪ ಪೂಜಾರ ಮುಂತಾದವರಿದ್ದರು. ಶಿಕ್ಷಕ ಮಲ್ಲಿಕಾರ್ಜುನ ಗೌಡಣ್ಣವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವಿಶೇಷವಾಗಿ ಗ್ರಾ.ಪಂ ಆವರಣದಲ್ಲಿ ಅಂಬೇಡ್ಕರರ ಪುತ್ಥಳಿ ನಿರ್ಮಾಣದ ಕುರಿತು ಒಮ್ಮತದಿಂದ ಠರಾವು ಪಾಸು ಮಾಡಲು ಗಟ್ಟಿ ನಿರ್ಧಾರ ಕೈಗೊಂಡ ಎಲ್ಲಾ ಸದಸ್ಯರಿಗೂ ಸಮುದಾಯದ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಸಮುದಾಯದ ಹಿರಿಯರಾದ ಮರಿತಿಮ್ಮಪ್ಪ ಆದಮ್ಮನವರ, ಕೆ.ಎನ್. ದೊಡ್ಡಮನಿ, ಡಿ. ಪ್ರಸಾದ, ಮರಿಯಪ್ಪ ಸಿದ್ದಣ್ಣವರ, ಗವಿಸಿದ್ದಪ್ಪ ಬಿಸನಹಳ್ಳಿ, ವಿರೂಪಾಕ್ಷಪ್ಪ ಯಲಿಗಾರ, ನಾಗಪ್ಪ ತಳವಾರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಲಾಯಿತು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!