ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ರೆಡ್ಡಿ ಮಹಿಳಾ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ದಕ್ಷಿಣ ಭಾರತದ ಜೋನಲ್ ಮಟ್ಟಕ್ಕೆ ಆಯ್ಕೆಯಾದ ಪುನೀತ್ ರೆಡ್ಡಿ ಎನ್.ಎ ಅವರನ್ನು ರೆಡ್ಡಿ ಮಹಿಳಾ ಬಳಗದ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿಯ ಸಾಧನೆಯ ಕುರಿತು ಶೈಲಜಾ ಕವಲೂರು ಮಾತನಾಡುತ್ತಾ, ಬೆಳೆವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಪುನೀತ್ ರೆಡ್ಡಿಯ ಸಾಧನೆ ನಮ್ಮೆಲ್ಲರಿಗೂ ಸಂತಸ ತಂದಿದೆ. ವಿಜ್ಞಾನ-ತಂತ್ರಜ್ಞಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ದಕ್ಷಿಣ ಭಾರತದ ಝೋನಲ್ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ನಮ್ಮ ಬಳಗದ ಪರವಾಗಿ ವಿದ್ಯಾರ್ಥಿಯು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸುಮಾ ಶಿವನಗೌಡರ, ಶೋಭಾ ಪಾಟೀಲ್, ಲತಾ ಮುಂಬಾರಡ್ಡಿ, ಸವಿತಾ ಭರಮಗೌಡರ್, ಶೋಭಾ ಭೂಮರಡ್ಡಿ, ಸವಿತಾ ಹೊಸಮನಿ, ಆಶಾ ಓದುಗೌಡರ, ಕವಿತಾ ಪಾಟೀಲ, ಪೂರ್ಣಿಮಾ ಪಾಟೀಲ್, ವರ್ಷಾ ಮೇಕಳಿ, ಸುಜಾತಾ ರಡ್ಡೇರ, ವಿಜಯಲಕ್ಷ್ಮಿ ಮುಂತಾದವರು ಉಪಸ್ಥಿತರಿದ್ದರು.
ಸುನೀತಾ ಕೋನರಡ್ಡಿ ಪ್ರಾರ್ಥಿಸಿದರು. ಸುಧಾ ಹುಚ್ಚಣ್ಣವರ ಸ್ವಾಗತಿಸಿದರು. ವೀಣಾ ತಿರ್ಲಾಪುರ್ ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ವರಿ ಶಿರೋಳ್ ವಂದಿಸಿದರು.



