ವಿಜಯಸಾಕ್ಷಿ ಸುದ್ದಿ, ವಿಜಯನಗರ:
Advertisement
ಸಿಡಿಲು ಬಡಿದು ಅಪ್ಪ ಮಗ ಸೇರಿ ಮೂವರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.
ಮಲ್ಲಿಕಾರ್ಜುನ (34), ಮಗ ಮೈಲಾರಿ (11), ಉಪ್ಪಾರ ಹನುಮಂತಪ್ಪ (35) ಮೃತ ದುರ್ದೈವಿಗಳು. ಜತೆಗೆ 2 ಆಡುಗಳು ಸಾವನ್ನಪ್ಪಿವೆ.
ಹಗರಿಬೊಮ್ಮನಹಳ್ಳಿ ಕೆಳಬಾಗದಲ್ಲಿ ಆಡು ಮೇಯಿಸಲು ತೋಟಕ್ಕೆ ಹೋಗಿದ್ದ ವೇಳೆ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.