
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರಟ್ಟಿನ ಬಾಕ್ಸ್ನಲ್ಲಿ ಶಿಶುವಿನ ಶವ ಇರುವುದನ್ನು ಕೆಲ ಸ್ಥಳೀಯರು ಪತ್ತೆ ಮಾಡಿ ಸಿಬ್ಬಂದಿ ನಿರ್ಲಕ್ಷ್ಯ ಎಂದು ಆರೋಪಿಸಿದ್ದಾರೆ.
ಜನರ ಕಣ್ಣಿಗೆ ಬಿದ್ದಂತೆ ಶಿಶುವಿನ ಶವ ರಟ್ಟಿನ ಬಾಕ್ಸ್ನಲ್ಲಿ ಇದ್ದದ್ದು ನಿಜವಾದರೂ ಇದಕ್ಕೆ ಕಾರಣ ಆಸ್ಪತ್ರೆಯ ಸಿಬ್ಬಂದಿಯಲ್ಲ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಈ ಕುರಿತು ವಿಜಯಸಾಕ್ಷಿಯೊಂದಿಗೆ ಮಾತನಾಡಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಶಾಂತ್ ಬಾಬು ಅವರು, ಕುಷ್ಟಗಿಯಿಂದ ಶನಿವಾರ ರಾತ್ರಿ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಕೇಸ್ ದಾಖಲಾಗಿತ್ತು. ಸಹಜ ಹೆರಿಗೆ ಮೂಲಕ ಶಿಶು ತೆಗೆಯಿತಾದರೂ ಅದು ಹೊಟ್ಟೆಯಲ್ಲಿ ಅಸು ನೀಗಿತ್ತು. ಹೆತ್ತವರ ಸುಪರ್ದಿಗೆ ಶಿಶುವನ್ನು ಒಪ್ಪಿಸಲಾಗಿದ್ದು, ವಾಹನ ತರಲು ಹೋಗುವ ವೇಳೆ ಶಿಶುವನ್ನು ರಟ್ಟಿನ ಬಾಕ್ಸ್ನಲ್ಲಿಟ್ಟು ತೆರಳಿದ್ದಾರೆ. ಕೆಲ ನಿಮಿಷಗಳ ಬಳಿಕ ಹೆತ್ತವರೇ ಶಿಶುವಿನ ಶವವನ್ನ ಒಯ್ದಿದ್ದಾರೆ. ಅಷ್ಟರಲ್ಲಿಯೇ ಕೆಲವರು ರಟ್ಟಿನ ಬಾಕ್ಸ್ನಲ್ಲಿ ಶಿಶುವಿನ ಶವ ಕಂಡು ಫೋಟೋ, ವಿಡಿಯೋ ತೆಗೆದು ಆಸ್ಪತ್ರೆ ಹಾಗೂ ಇಲ್ಲಿನ ಸಿಬ್ಬಂದಿ ವಿರುದ್ಧ ಅನಗತ್ಯ ಆರೋಪ ಮಾಡಿದ್ದಾರೆ ಎಂದರು.