ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚೆಗೆ ಮೈಸೂರಿನಲ್ಲಿ ಪ್ರೋಪಾತ್ ಅಕಾಡೆಮಿ ವತಿಯಿಂದ 7ನೇ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸದ್ವಿದ್ಯಾ ಅಬಾಕಸ್ ಬ್ರಾಂಚ್, ಹೊಳೆಆಲೂರು ವತಿಯಿಂದ ಭಾಗವಹಿಸಿದ್ದ 21 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿ ಒಟ್ಟು 14 ಟ್ರೋಫಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜ್ಯೂನಿಯರ್ ವಿಭಾಗದಲ್ಲಿ ನಫೀಸ್ ಕೊತಬಾಳ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಸಾನ್ವಿ ಕಿತ್ತಲಿ ಪ್ರಥಮ ಸ್ಥಾನ ಪಡೆದರೆ, ಮರಳು ಸಿದ್ದೇಶ್ ಹಿರೇಮಠ, ಮಲ್ಲನಗೌಡ ಕೆಂಚನಗೌಡ್ರು, ಆದಿಲ್ ಕೊತಬಾಳ ಹಾಗೂ ಸುಮಾ ಅಂಗಡಿ ದ್ವಿತೀಯ ಸ್ಥಾನ ಹಾಗೂ ಟ್ರೋಫಿ ಪಡೆದಿದ್ದಾರೆ.
ಸೀನಿಯರ್ ವಿಭಾಗದಲ್ಲಿ ಸಿಂಚನ ಕೊಣ್ಣೂರ ಚಾಂಪಿಯನ್ ಆಫ್ ಚಾಂಪಿಯನ್ ಆಗಿ ಪ್ರಶಸ್ತಿ ಪಡೆದರು. ಗಿರೀಶ ಗೌಡ ಚೆನ್ನಪ್ಪ ಗೌಡ್ರು ಹಾಗೂ ತೇಜಸ್ವಿನಿ ಅಜಗುಂಡಿ ಪ್ರಥಮ ಸ್ಥಾನ, ಕೃತಿಕಾ ಬಡಿಗೇರ, ತರುಣ ಬಡಿಗೇರ ಹಾಗೂ ನಿಸರ್ಗ ಮೆಣಸಗಿ ದ್ವಿತೀಯ ಸ್ಥಾನ ಗಳಿಸಿದರು. ಆಧ್ಯಾ ಪಟ್ಟಣಶೆಟ್ಟಿ ಹಾಗೂ ಲೋಕೇಶ್ವರಿ ಕೆಲೂರ್ ತೃತೀಯ ಸ್ಥಾನ ಪಡೆದಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನಗಳನ್ನು ಪಡೆದು ಸಂಸ್ಥೆಗೆ ಗೌರವ ತಂದಿದ್ದಾರೆ.
ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಸದ್ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು, ಸದ್ವಿದ್ಯಾ ಶಾಲಾ ಸಿಬ್ಬಂದಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದು, ಮಕ್ಕಳ ಪಾಲಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.



