ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಸರಾಫ್ ಬಜಾರ್ ಅಂಬಾಭವಾನಿ ದೇವಸ್ಥಾನದಲ್ಲಿ ಮಕರ ಸಂಕ್ರಮಣವನ್ನು ಸಂಭ್ರಮದಿಂದ ಆಚರಿಸಲಾಯಿತು.
ತ್ರಿಷಾ ವೆಂಕಟೇಶ್ ಬಾಕಳೆ ನೃತ್ಯದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಫಾರ್ಮಸಿಸ್ಟ್ ಗೀತಾ ಕಲಬುರ್ಗಿ ಆಗಮಿಸಿದ್ದರು.
ಬೆಟಗೇರಿ ಮಹಿಳಾ ಮಂಡಲದ ಅಧ್ಯಕ್ಷೆ ಸರೋಜ ಎಚ್. ಕಬಾಡಿ ಮಾತನಾಡಿ, ಸೂರ್ಯದೇವನ ಪಥ ಸಂಚಲನ, ಎಳ್ಳು-ಬೆಲ್ಲ ಬೀರುವ ಮಹತ್ವವನ್ನು ತಿಳಿಸಿದರು. ಮಾಜಿ ಅಧ್ಯಕ್ಷೆ ಸರೋಜಾಬಾಯಿ ಟಿಕಂದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎರಡು ವರ್ಷಕ್ಕೊಮ್ಮೆ ಬದಲಾವಣೆಯಾಗುವ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮಂಡಲದ ಉಪಾಧ್ಯಕ್ಷೆ ಸ್ನೇಹಲತಾ ಕಬಾಡಿಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷೆ ಉಮಾಬಾಯಿ ಎಸ್. ಬೇವಿನಕಟ್ಟಿ ಎರಡು ವರ್ಷ ತಾವು ಮಾಡಿದ ಕಾರ್ಯಕ್ರಮಗಳ ವಿವರಣೆ ನೀಡಿದರು.
ಕಾರ್ಯದರ್ಶಿ ರೇಖಾಬಾಯಿ ಬೇವಿನಕಟ್ಟಿ ಮತ್ತು ಖಜಾಂಚಿ ಕಸ್ತೂರಬಾಯಿ ಭಾಂಡಗೆ, ಸಹ ಕಾರ್ಯದರ್ಶಿ ಗೀತಾ ಹಬೀಬ ವೇದಿಕೆಯಲ್ಲಿದ್ದರು. ಲಲಿತಾಬಾಯಿ ಬಾಕಳೆ ಪ್ರಾರ್ಥಿಸಿದರು. ರತ್ನಾಬಾಯಿ ಹಬೀಬ ಸ್ವಾಗತಿಸಿದರೆ, ರೇಖಾಬಾಯಿ ಖಟವಟೆ ಕಾರ್ಯಕ್ರಮ ನಿರೂಪಿಸಿದರು. ಹೇಮಾ ಬೇವಿನಕಟ್ಟಿ ವಂದಿಸಿದರು.
ಮಹಿಳಾ ಮಂಡಲದ ಸದಸ್ಯರಾದ ಗೀತಬಾಯಿ ಭಾಂಡಗೆ, ಲಕ್ಷ್ಮೀ ಆರ್. ಖಟವಟೆ, ಸುನಂದಾಬಾಯಿ ಕೆ. ಹಬೀಬ, ಅಂಬೂಬಾಯಿ ಬೇವಿನಕಟ್ಟಿ, ಅನ್ನಪೂರ್ಣ ಶಿದ್ಲಿಂಗ್, ಶಾಂತಾಬಾಯಿ ಬಾಕಳೆ, ಶೋಭಾ ಭಾಂಡಗೆ, ಲಕ್ಷ್ಮೀ ಎಂ. ಖಟವಟೆ, ಭಾವನಾ ಭಾಂಡಗೆ, ಸುನಂದಾಬಾಯಿ ಎಸ್. ಹಬೀಬ್, ಪದ್ಮಾ ಕಬಾಡಿ, ನೀತಾ ಹಬೀಬ, ವಂದನಾ ವಿ. ಶಿದ್ಲಿಂಗ್ ಉಪಸ್ಥಿತರಿದ್ದರು.



