HomeGadag News77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಧಕರಿಗೆ ಸನ್ಮಾನ, ಆಕರ್ಷಕ ಪಥಸಂಚಲನ

77ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಧಕರಿಗೆ ಸನ್ಮಾನ, ಆಕರ್ಷಕ ಪಥಸಂಚಲನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಗದಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಕಾನೂನು, ಸಂಸದೀಯ, ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ 77ನೇ ಗಣರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.

ನಂತರ ಜರುಗಿದ ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಶಂಕರಗೌಡ ಚೌಧರಿ ವಹಿಸಿದ್ದರು. ಜಿಲ್ಲಾ ಪೊಲೀಸ್ ಬ್ಯಾಂಡ್‌ನ ಮೇರೆಗೆ ದೇಶ ಕಿ ಧರತಿ ಹಾಡಿನ ಹಿಮ್ಮೇಳದಲ್ಲಿ ಶಿಸ್ತಿನ ಹೆಜ್ಜೆ ಹಾಕಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್ ಪಡೆ, ಹೋಮ್‌ಗಾರ್ಡ್, ಅಬಕಾರಿ, ಅರಣ್ಯ ರಕ್ಷಕ ಪಡೆ, ಅಗ್ನಿಶಾಮಕ ದಳ, ಎನ್.ಸಿ.ಸಿ ಬಾಯ್ಸ್ ಹಾಗೂ ಗರ್ಲ್ಸ್, ಮಾಜಿ ಸೈನಿಕರ ಸಂಘ, ಸ್ಕೌಟ್ಸ್, ಗೈಡ್ಸ್, ಜನರಲ್ ಹಾಗೂ ಸೇವಾ ದಳಗಳು ಸಚಿವರಿಗೆ ಗೌರವವಂದನೆ ನೀಡಿದವು.

ಸಾರ್ವಜನಿಕ ವಲಯದಲ್ಲಿ ಪ್ರಾಮಾಣಿಕತೆ ಮೆರೆದ ಪ್ರಜ್ವಲ್ ರಿತ್ತಿ, ಕಸ್ತೂರೆವ್ವ ರಿತ್ತಿ, ಗಂಗವ್ವ ರಿತ್ತಿ, ರಜೀಯಾಬೇಗಂ ತಹಸೀಲ್ದಾರ, ಕಿಡ್ನಿ ಕಸಿ ಮಾಡುವುದರಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಡಾ. ಪವನ ಕೋಳಿವಾಡ, ಡಾ. ಭುವನೇಶ ಆರಾಧ್ಯ, ಡಾ. ದೀಪಕ ಕುರಹಟ್ಟಿ, ಮುಖ್ಯಮಂತ್ರಿಯವರ ಪದಕ ಪುರಸ್ಕೃತರಾದ ಶಿದ್ದಾರೆಡ್ಡಿ ಕಪ್ಪತ್ತನವರ, ಅಂಗಾಂಗ ದಾನ ಮಾಡಿದ ನಾರಾಯಣ ವನ್ನಾಲ ಕುಟುಂಬಸ್ಥರಿಗೆ, ಸಮಾಜ ಸೇವಾ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದ ಡಾ. ಹೇಮರಡ್ಡಿ ಕಿಲಬನವರ, ಎನ್.ಸಿ.ಸಿ ವಿಭಾಗದಲ್ಲಿ ಪದನ್ನೋತಿ ಹೊಂದಿದ ಮೇಜರ್ ಡಾ. ಬಿ.ಎಸ್. ರಾಠೋಡ, ರಾಜ್ಯ ಮಟ್ಟದ ಕನ್ನಡ ಸೇವಾ ಪ್ರಶಸ್ತಿಗೆ ಭಾಜನರಾದ ರಾಘವೇಂದ್ರ ಗೆಜ್ಜಿ, ಸರ್ಕಾರಿ ಸೇವೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಸುಜಾತಾ ಗೊಬ್ಬರಗುಂಪಿ, ರವಿ ಎಲ್.ಗುಂಜೀಕರ, ಗುರುರಾಜ್ ಚವ್ಹಾಣ್, ಅಕ್ಕಮಹಾದೇವಿ ತಳವಾರ, ಬಿ.ಎಸ್. ಚಕಾರಿ, ದಾವಲಸಾಬ ಗುಬ್ಬಿ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನೀಡಿದ ಪ್ರೇಮನಗೌಡ ಪವಾಡಿಗೌಡ್ರ, ಶಿವನಗೌಡ್ರ ಪವಾಡಿಗೌಡ್ರ, ರಾಮನಗೌಡ ಬೋಜಪ್ಪಗೌಡ, ಈಶ್ವರಪ್ಪ ಕುಂಬಾರ, ಪ್ರಕಾಶ ತೋಪಿನ ಇವರನ್ನು ಸನ್ಮಾನಿಸಲಾಯಿತು.

ಪತ್ರಿಕೋದ್ಯಮ/ಮಾಧ್ಯಮ ವಿಭಾಗದಲ್ಲಿ ರಮೇಶ ಭಜಂತ್ರಿ, ಮಾಲಿಂಗಯ್ಯ ಹಿರೇಮಠ, ರಮೇಶ ನಾಡಿಗೇರ, ಎಂ.ಎ. ಸ್ವಾಮಿ, ಸಿ.ಎಸ್. ಅರಸನಾಳ, ಪ್ರಾಣೇಶ ಕೊಡಗಾನೂರ, ಮೆಹಬೂಬ ಮೋತೆಖಾನ್, ಶಿದ್ದಲಿಂಗಯ್ಯ ಮಣ್ಣೂರಮಠ, ಲೋಕೇಶ ಮಲ್ಲಿಗವಾಡ, ಚಂದ್ರು ಭಜಂತ್ರಿ, ಸುನೀಲಸಿಂಗ್ ಲದ್ದಿಗೇರಿ ಅವರನ್ನು ಗೌರವಿಸಲಾಯಿತು.

ಎಲ್.ಎಲ್.ಎಂ ಉನ್ನತ ಶಿಕ್ಷಣ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಹನಾ ಕಾರ್ಕಳ, ಬಾಲ ಗೌರವ ಪ್ರಶಸ್ತಿ ಪಡೆದ ಸುಪ್ರಿಯಾ ಇಟಗಿ, ರಾಜ್ಯಮಟ್ಟದ ಸಂಸತ್ ಅಣಕು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಿಯಾಂಕಾ ಮಾನೆ, ರಾಜ್ಯಮಟ್ಟದ ಏಕಪಾತ್ರಾಭಿನಯದಲ್ಲಿ ಪ್ರಥಮ ಸ್ಥಾನ ಪಡೆದ ನಿಧಿ ತೋಟದ, ಏಕಲವ್ಯ ಪ್ರಶಸ್ತಿ ಪಡೆದ ಐಶ್ವರ್ಯ ಕರಿಗಾರ, ಎಸ್.ಎಸ್.ಎಲ್.ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಮಲ್ಲಪ್ಪ ಬೋಳನವರ, ಲಕ್ಷ್ಮೀ ಹಿರೇಮಠ, ಗಾಯತ್ರಿ ಹಳ್ಳಿ, ವರ್ಷಾ ಗುಂಜ್ಯಾಳ, ಸ್ಪೂರ್ತಿ ಉಡಚಗೊಂಡ, ಲಕ್ಷ್ಮೀ ನಲುಡಿ, ಕ್ರೀಡಾ ಕ್ಷೇತ್ರದಲ್ಲಿ ಮಾಲತಿ ಇನಾಮದಾರ, ವೈಭವ ಸಂಗನಬಶೆಟ್ಟರ್, ಸಿ.ಸಿ. ಮಂಜುನಾಥ ಕುರಿ, ಮಂಜುನಾಥ ಹಳೆರಿತ್ತಿ, ಸಾಕ್ಷಿ ಬಾಗಡೆ, ಅಮೃತಾ ಮೇಟಿ, ಪ್ರಿಯಾಂಕಾ ಲಮಾಣಿ, ಸೃಷ್ಟಿ ಪಾಟೀಲ, ಯಶವಂತಗೌಡ ನಾಡಗೌಡ್ರ, ಸಹನಾ ಹರ್ತಿ, ಆನಂದ ಬೇಂದ್ರೆ, ಮಹಾಂತೇಶ ಬೇಂದ್ರೆ, ಮಹಾಂತೇಶ ಬೇವೂರ, ಮೇಘಾ ಮುನವಳ್ಳಿಮಠ ಇವರುಗಳನ್ನು ಸಚಿವ ಎಚ್.ಕೆ. ಪಾಟೀಲ ಹಾಗೂ ಗಣ್ಯರು ಸನ್ಮಾನಿಸಿದರು.

ಸಮಾರಂಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಕೆ.ಆರ್, ಉಪವಿಭಾಗಾಧಿಕಾರಿ, ಗಂಗಪ್ಪ ಎಂ, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಸಚಿವ ಎಚ್.ಕೆ. ಪಾಟೀಲರು ಅಕ್ಕ ಪಡೆ ಯೋಜನೆಗೆ ಚಾಲನೆ ನೀಡಿದರು. ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಹೊಲಿಗೆ ಯಂತ್ರ ಕಿಟ್, ಇಲೆಕ್ಟ್ರಿಷಿಯನ್ ಕಿಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕಲಾವಿದರಿಗೆ, ಸಾಹಿತಿಗಳಿಗೆ ಮಾಸಾಶನ ಮಂಜೂರಾತಿ ಪತ್ರ, ಕಾರ್ಮಿಕ ಇಲಾಖೆ ವತಿಯಿಂದ ಸೇಪ್ಟಿ ಕಿಟ್, ಗೌಂಡಿ ಕಿಟ್, ಪ್ಲಂಬರ್ ಕಿಟ್, ಕಾರ್ಪೆಂಟರ್, ವೆಲ್ಡರ್ ಕಿಟ್, ಕೃಷಿ ಇಲಾಖೆಯ ವತಿಯಿಂದ ಫಲಾನುಭವಿಗಳಿಗೆ ವಿವಿಧ ಯಂತ್ರೋಪಕರಣಗಳನ್ನು ವಿತರಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!