Homekoppalಚುನಾವಣೆ ವೇಳೆಗೆ ಮೂವರು ಸಿಎಂ ಆಗಬಹುದು

ಚುನಾವಣೆ ವೇಳೆಗೆ ಮೂವರು ಸಿಎಂ ಆಗಬಹುದು

For Dai;y Updates Join Our whatsapp Group

Spread the love

ಜನೆವರಿ ವೇಳೆಗೆ ಬಸವರಾಜ್ ಬೊಮ್ಮಾಯಿ ಸಿಎಂ ಸ್ಥಾನದಿಂದ ಇಳಿತಾರೆ- ಶಿವರಾಜ್ ತಂಗಡಗಿ

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ : ಬಿಟ್ಕಾಯಿನ್ ವಿಚಾರದಲ್ಲಿ ಬಿಜೆಪಿಯವರು‌ ಬಹಳ‌ ಜನ ಇದ್ದಾರೆ. ಅದನ್ನ ಡೈವರ್ಟ್ ಮಾಡಲು ಸಿದ್ದರಾಮಯ್ಯ ದಲಿತ ವಿರೋಧಿ ಅಂತ ಬೊಬ್ಬೆ ಹಾಕ್ತಿದ್ದಾರೆ. ಬಿಟ್ಕಾಯಿನ್ ವಿಚಾರವಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಜನವರಿ ವೇಳೆಗೆ ಅಧಿಕಾರದಿಂದ ಕೆಳಗೆ ಇಳೀತಾರೆ ಎಂದು‌ ಮಾಜಿ ಸಚಿವ ಶಿವರಾಜ್ ತಂಗಡಗಿ ಹೊಸ ಬಾಂಬ್ ಸಿಡಿಸಿದರು.

ನಗರದ ಸ್ಥಳೀಯ ಶಾಸಕರ ನಿವಾಸದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಟ್ಕಾಯಿನ್ ಹಗರಣದಲ್ಲಿ ಸಾಕಷ್ಟು ಜನ ಬಿಜೆಪಿಯವರು ಭಾಗಿಯಾಗಿದ್ದಾರೆ. ಸಮಯ ಬಂದಾಗ ಎಲ್ಲಾ ದಾಖಲೆಗಳನ್ನು ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಲಿದೆ. ಚುನಾವಣೆ ವೇಳೆಗೆ ರಾಜ್ಯಕ್ಕೆ ಇನ್ನು ಇಬ್ಬರು ಸಿಎಂ ಆಗಬಹುದು. ಬಿಜೆಪಿಯವರು ಅಧಿಕಾರ ಮಾಡುವಷ್ಟು ಶಕ್ತರಾಗಿಲ್ಲ ಎಂದರು. ‌

ಇನ್ನು ಸಿದ್ದರಾಮಯ್ಯ ಬಗ್ಗೆ ಮಾತನಾಡುವ ಸಚಿವ ಕೆ.ಎಸ್ ಈಶ್ವರಪ್ಪನವರೇ ಅಪವಿತ್ರರಿದ್ದಾರೆ.ಇಷ್ಟೇ ಅಲ್ಲದೆ
ಬಿಜೆಪಿಯವರು ಎಲ್ಲರೂ ಎಲ್ಲಾ ವಿಚಾರದಲ್ಲೂ ಅಪವಿತ್ರರು ಎಂದು ವ್ಯಂಗ್ಯವಾಡಿದರು.

ಬಿಜೆಪಿ ಎಸ್ ‌ಸಿ ಮೋರ್ಚಾದವರು ಸಿದ್ದರಾಮಯ್ಯ ಬಗ್ಗೆ ಕೆಟ್ಟದಾಗಿ ಮಾತಾಡ್ತಿದಾರೆ. ಕಾರಜೋಳ, ಜಿಗಜಿಣಗಿ ಸ್ವಾರ್ಥಕ್ಕಾಗಿ ಬಿಜೆಪಿಗೆ‌ ಹೋಗಿದ್ದಾರೆ.
ದಲಿತ ಸಮಾಜಕ್ಕೆ ಇವರು ಕೊಟ್ಟಿರುವ ಕೊಡುಗೆ ಏನು..?
ಗಂಜಿ ಗಿರಾಕಿಗಳು ಹೊಟ್ಟೆಪಾಡಿಗಾಗಿಯೇ ದಲಿತ ಹೆಸರಿನಲ್ಲಿ ಬಿಜೆಪಿಗೆ ಹೋಗಿದ್ದಾರೆ ಎಂದು ಸಿದ್ದರಾಮಯ್ಯನವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಗೂಳಪ್ಪ ಹಲಗೇರಿ ಕಾಂಗ್ರೆಸ್ ಮುಖಂಡರಾದ ಕೃಷ್ಣ ಇಟ್ಟಂಗಿ, ರವಿ ಕುರಗೋಡ, ಕೃಷ್ಣಾ ಗಲಭಿ, ಎಸ್.ಬಿ.ನಾಗರಳ್ಳಿ, ಗಾಳೆಪ್ಪ ಪೂಜಾರ, ಮಲ್ಲು ಪೂಜಾರ, ಸಿದ್ದನಗೌಡರು, ತಮೇಶ್ ನಾಯ್ಕ ನಿಂಗಜ್ಜ ಶಹಪುರ ಮತ್ತಿತರರು ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!