HomeGadag Newsಗದಗ|ಪೋಡಿ ಮಾಡಲು ಲಂಚ: ಲೋಕಾಯುಕ್ತರಿಂದ ಇಬ್ಬರ ಬಂಧನ

ಗದಗ|ಪೋಡಿ ಮಾಡಲು ಲಂಚ: ಲೋಕಾಯುಕ್ತರಿಂದ ಇಬ್ಬರ ಬಂಧನ

For Dai;y Updates Join Our whatsapp Group

Spread the love

ಗದಗ: ಸರಕಾರದ ಉಚಿತ ಪೋಡಿಮುಕ್ತ ಯೋಜನೆಯಡಿ ಮಾಡಬೇಕಾದ ಜಮೀನು ಸಂಬಂಧಿತ ಕೆಲಸಕ್ಕೆ ಲಂಚ ಬೇಡಿಕೆ ಇಟ್ಟು ಹಣ ಸ್ವೀಕರಿಸಿದ ಆರೋಪದಲ್ಲಿ ಗದಗ ಜಿಲ್ಲಾ ಲೋಕಾಯುಕ್ತ ಪೊಲೀಸರು ಇಬ್ಬರನ್ನು ದಸ್ತಗಿರಿ ಮಾಡಿದ ಘಟನೆ ಮಂಗಳವಾರ ನಡೆದಿದೆ.

ಹರ್ಲಾಪುರ ಗ್ರಾಮದ ನಿವಾಸಿ ಗಣೇಶ ಅಂದಪ್ಪ ಮುಂಡರಗಿ ಅವರು, ಒಂದು ತಿಂಗಳ ಹಿಂದೆ ಹರ್ಲಾಪುರದಲ್ಲಿ 6 ಗುಂಟೆ ಜಮೀನನ್ನು ಖರೀದಿಸಿದ್ದು, ಅದು ಮೂಲ ಮಾಲೀಕರೊಂದಿಗೆ ಜಂಟಿ ಉತಾರವಾಗಿದ್ದು, ಪೋಡಿ ಮಾಡಬೇಕಾದ ಅಗತ್ಯವಿತ್ತು. ಈ ಸಂಬಂಧ ಸರಕಾರದ ಉಚಿತ ಪೋಡಿಮುಕ್ತ ಯೋಜನೆಯಡಿ ಗದಗ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಎರಡು ಬಾರಿ ಭೇಟಿ ನೀಡಿದ್ದರು.

ಆದರೆ, ಅಲ್ಲಿ ಅರ್ಜಿ ವಿಚಾರಣೆ ಮಾಡುತ್ತಿದ್ದ ಮೋಜಣಿ ಡಾಟಾ ಎಂಟ್ರಿ ಆಪರೇಟರ್ ಶ್ರೀಮತಿ ಕವಿತಾ ವಿ. ಚಿಕ್ಕಮಠ ಅವರು ಮೊದಲಿಗೆ 3,000 ರೂ ಹಾಗೂ ನಂತರ 2,500 ರೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಉಚಿತವಾಗಿ ನಡೆಯಬೇಕಾದ ಸರಕಾರಿ ಕೆಲಸಕ್ಕೆ ಲಂಚ ಕೇಳಿ ಪದೇಪದೇ ಅಲೆದಾಡಿಸಿದ್ದ ಹಿನ್ನೆಲೆಯಲ್ಲಿ ಫಿರ್ಯಾದಿದಾರರು ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿದ್ದರು.

ಈ ದೂರಿನ ಮೇರೆಗೆ, ದಿನಾಂಕ 03-02-2026 ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಫಿರ್ಯಾದಿದಾರರು ಕಚೇರಿಗೆ ತೆರಳಿ ತಮ್ಮ ಕೆಲಸದ ಕುರಿತು ವಿಚಾರಿಸಿದಾಗ, ಶ್ರೀಮತಿ ಕವಿತಾ ವಿ. ಚಿಕ್ಕಮಠ ಅವರು 2,500 ರೂ ಹಣ ಕೇಳಿದ್ದು, ಅವರ ಸೂಚನೆಯಂತೆ ಕಚೇರಿಯ ಹೊರಗುತ್ತಿಗೆ ಸಿಬ್ಬಂದಿ ನಾಗೇಶ ಗಣಪ ಬಡಿಗೇರ (ಸಾ: ಹರ್ಲಾಪುರ) ಅವರು ಲಂಚದ ಹಣವನ್ನು ಸ್ವೀಕರಿಸಿದ್ದಾರೆ. ಈ ವೇಳೆ ಇಬ್ಬರನ್ನೂ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

ಈ ಕಾರ್ಯಾಚರಣೆ ಲೋಕಾಯುಕ್ತ ಎಸ್‌ಪಿ ಎಸ್.ಟಿ. ಸಿದ್ದಲಿಂಗಪ್ಪ (ಧಾರವಾಡ) ಹಾಗೂ ಡಿವೈಎಸ್ಪಿ ವಿಜಯ ಬಿರಾದಾರ ಅವರ ಮಾರ್ಗದರ್ಶನದಲ್ಲಿ, ಗದಗ ಲೋಕಾಯುಕ್ತ ಠಾಣೆಯ ಇನ್ಸಪೆಕ್ಟರ್ ಶ್ರೀಮತಿ ಎಸ್.ಎಸ್. ತೇಲಿ ಹಾಗೂ ಸಿಬ್ಬಂದಿಗಳಾದ ಹಸನ್, ಗಾರ್ಗಿ, ಬಾರಡ್ಡಿ, ಡಿಡಗೂರು, ಸಂಗನಾಳ, ಜವಳಿ, ಅಂಬಿಗೇರ, ಹಿರೇಮಠ, ನೈನಾಪುರ ಇದ್ದರು.

ಇದಲ್ಲದೆ, ಯಾವುದೇ ಸರಕಾರಿ ಕಚೇರಿಯಲ್ಲಿ ಸರಕಾರಿ ಕೆಲಸಕ್ಕಾಗಿ ಲಂಚ ಅಥವಾ ಇತರೆ ಅಕ್ರಮ ಬೇಡಿಕೆ ಇಟ್ಟಲ್ಲಿ, ಸಾರ್ವಜನಿಕರು ಧೈರ್ಯವಾಗಿ ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡುವಂತೆ ಲೋಕಾಯುಕ್ತ ಪೊಲೀಸರು ಮನವಿ ಮಾಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!