ಸವದತ್ತಿ: ತೀವ್ರ ಚಳಿ ಪರಿಸ್ಥಿತಿಯಿಂದ ಬಳಲುತ್ತಿರುವ ವೃದ್ಧರು ಹಾಗೂ ನಿರ್ಗತಿಕರಿಗೆ ನೆರವಾಗುವ ಉದ್ದೇಶದಿಂದ ಜೀವ ಧ್ವನಿ ಫೌಂಡೇಶನ್ ವತಿಯಿಂದ ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ಸ್ವೆಟರ್ ವಿತರಣಾ ಕಾರ್ಯಕ್ರಮ ನಡೆಸಲಾಯಿತು.
ಮಹಾಂತೇಶ ಕಟ್ಟಿಕರ್ ಅವರ ಉಪಸ್ಥಿತಿಯಲ್ಲಿ, ಸಂಸ್ಥಾಪಕ ನಿಖಿಲ್ ಹಂಜಗಿ ಅವರ ನೇತೃತ್ವದಲ್ಲಿ ಹಾಗೂ ಗೌರವಾಧ್ಯಕ್ಷ ಸಂತೋಷ್ ಆರ್. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಸೇವಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಈ ಕಾರ್ಯಕ್ರಮದಡಿ ಒಟ್ಟು 400 ಸ್ವೆಟರ್ಗಳನ್ನು ಸವದತ್ತಿ ತಾಲೂಕು ಸೇರಿದಂತೆ ಹುಬ್ಬಳ್ಳಿಯ ಸಿದ್ಧಿವಿನಾಯಕ ವೃದ್ಧಾಶ್ರಮ, ಧಾರವಾಡದ ದಯಾಶಂಕರ ಆಶ್ರಮ, ಛಬ್ಬಿಯ ಸಮೃದ್ಧಿ ವೃದ್ಧಾಶ್ರಮ, ಸಿದ್ದರೂಢ ಆಶ್ರಮ (ಬಗಡಗೇರಿ–ಮಿಶ್ರಿಕೋಟಿ) ಹಾಗೂ ವಿವಿಧೆಡೆ ಇರುವ ನಿರ್ಗತಿಕರು ಮತ್ತು ಆಶ್ರಯವಿಲ್ಲದ ಜನರಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಫೌಂಡೇಶನ್ನ ಗುರು ಉಂಕಿ, ಪರೋಕ್ಷ ಹೂಲಿ, ಜಾನ್ವಿ ಸುನಗರ, ಕಾರ್ತಿಕ್ ಕಿಂಟಿಗೊಂಡ್, ರಾಘವೇಂದ್ರ ಬಳ್ಳಾರಿ, ಅವಿನಾಶ್ ತೆಗ್ಗಿಹಳ್ಳಿ, ಕಿರಣ್ ಕೊಪ್ಪದ್, ಕೃಷ್ಣ ಸಾಬೋಜಿ, ಅನಿಕೇತ್ ಅರ್ಚಕ, ಶ್ರೀನಿವಾಸ್, ಶರವಣ, ಪರಮ್, ವಿನಾಯಕ್, ಉಮೇಶ್ ಬದ್ದಿ, ರೋಹಿತ್, ವಿಜಯ ಮೆಹರ್ವಾಡೆ, ಅಪೇಕ್ಷ ಹೂಲಿ, ಬೂಮಿಕಾ ಮಂಡ್ರೆ, ರೇಣುಕಾ, ಶಾಹೀನ್ ಕಿರೆಸೂರ್, ವೈಷ್ಣವಿ ಹಣಬರತ್ತಿ, ಅರುಣ್, ಪ್ರೀತಿ, ಸಂಜನಾ ಸೇರಿದಂತೆ ಕಮಿಟಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಚಳಿಯಿಂದ ಬಳಲುತ್ತಿರುವ ಸಮಾಜದ ದುರ್ಬಲ ವರ್ಗಗಳಿಗೆ ಅಗತ್ಯ ಸಹಾಯ ಒದಗಿಸುವ ನಿಟ್ಟಿನಲ್ಲಿ ಇಂತಹ ಸೇವಾ ಚಟುವಟಿಕೆಗಳನ್ನು ಮುಂದುವರಿಸಲಾಗುವುದು ಎಂದು ಜೀವ ಧ್ವನಿ ಫೌಂಡೇಶನ್ನ ಪದಾಧಿಕಾರಿಗಳು ತಿಳಿಸಿದ್ದಾರೆ.



