ಕಲಬುರಗಿ: ಲಾಡ್ಲೆ ಮಶಾಕ್ ದರ್ಗಾದ ಶಿವಲಿಂಗದಲ್ಲಿ ಪೂಜೆ ಸಲ್ಲಿಸಲು 13 ಜನರಿಗೆ ಕಲಬುರಗಿ ಹೈಕೋರ್ಟ್ ಇಂದು ಅವಕಾಶ ಕಲ್ಪಿಸಿದೆ.
ಹಿಂದೂ ಮುಖಂಡ ಗುರುಶಾಂತ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಏಕಸದಸ್ಯ ಪೀಠ ವಿಚಾರಣೆ ನಡೆಸಿದ ನಂತರ, ನ್ಯಾಯಮೂರ್ತಿ ಇಂದ್ರೀಶ್ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶದಂತೆ, ಈ 13 ಮಂದಿಗೆ ಮಧ್ಯಾಹ್ನ 2ರಿಂದ ಸಂಜೆ 8 ಗಂಟೆಯವರೆಗೆ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.
ನಿನ್ನೆ ಜಿಲ್ಲಾಡಳಿತ ಹಿಂದೂ ಮುಖಂಡರಿಂದ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ್ದು, ಹೈಕೋರ್ಟ್ ಮೊರೆ ಹೋಗಿ ಅವಕಾಶ ಪಡೆಯಲು ಮುಂದಾದರು. ಇದೀಗ ಹೈಕೋರ್ಟ್ ಆದೇಶದಿಂದ ಪೂಜೆ ಜಾರಿಗೆ ಬರುವ ಮೂಲಕ ಹಿಂದೂ ಸಮುದಾಯಕ್ಕೆ ನ್ಯಾಯಮೂಲಕ ಹಕ್ಕು ದೊರಕಿದೆ.



