HomeGadag Newsಹಿಂದೂಗಳಿಗೆ ಸೇವಾಲಾಲರ ಆಧ್ಯಾತ್ಮಿಕತೆ, ಶಿವಾಜಿ ಶೌರ್ಯ ಅಗತ್ಯವಿದೆ: ಸೋಮಲಿಂಗ ಶ್ರೀಗಳು

ಹಿಂದೂಗಳಿಗೆ ಸೇವಾಲಾಲರ ಆಧ್ಯಾತ್ಮಿಕತೆ, ಶಿವಾಜಿ ಶೌರ್ಯ ಅಗತ್ಯವಿದೆ: ಸೋಮಲಿಂಗ ಶ್ರೀಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಶಿವಾಜಿ ಮಹಾರಾಜರು ಕೇವಲ ಯುದ್ಧ ಮಾಡಿ ಹಿಂದೂ ಸಾಮ್ರಾಜ್ಯ ಕಟ್ಟಲಿಲ್ಲ. ಆಧ್ಯಾತ್ಮಿಕತೆಯ ಮೂಲಕವೂ ಕಟ್ಟಿದ್ದಾರೆ. ಸಂತ ಸೇವಾಲಾಲರ ಆಧ್ಯಾತ್ಮಿಕತೆ, ಶಿವಾಜಿ ಮಹಾರಾಜರ ಶೌರ್ಯದಿಂದ ಹಿಂದೂಗಳು ಹಿಂದೂಗಳಾಗಿ ಉಳಿಯಲು ಸಾಧ್ಯವಾಗಿದೆ. ಕೆಲವು ಮಠಾಧೀಶರು ಹಿಂದೂ ದೇವರುಗಳಿಗೆ ಅವಮಾನ ಮಾಡುತ್ತಿದ್ದಾರೆ. ಅವರಿಗೆ ಸೇವಾಲಾಲರ ಆಧ್ಯಾತ್ಮಿಕತೆ ಉಪಯೋಗಕ್ಕೆ ಬರುವುದಿಲ್ಲ. ಶಿವಾಜಿ ಮಹಾರಾಜರಂತಹ ಪರಾಕ್ರಮ ಬೇಕಾಗಿದೆ ಎಂದು ವಿಜಯಪುರ ಜಿಲ್ಲೆಯ ಶಂಕರಲಿಂಗ ಗುರುಪೀಠದ ಶ್ರೀ ಸೋಮಲಿಂಗ ಶ್ರೀಗಳು ನುಡಿದರು.

ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಹಿಂದೂ ಸಂಘಟನೆಗಳ ಒಕ್ಕೂಟ, ಶಿವ ರಾಮಕೃಷ್ಣ ಸೇವಾ ಟ್ರಸ್ಟ್ ಗದಗ, ದಲಿತ ಮಿತ್ರ ಮೇಳ ಹಾಗೂ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಸಮಿತಿ-2026 ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 399ನೇ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಪಠ್ಯಪುಸ್ತಕದಲ್ಲಿ ಕೇವಲ ಅಪ್ಜಲಖಾನ್, ಬಾಬರ್, ಅಕ್ಬರ್ ಚರಿತ್ರೆ ತೋರಿಸಲಾಗಿದೆ. ಆದರೆ, ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ತೋರಿಸಲಿಲ್ಲ. ಮುಸಲ್ಮಾನ ದೊರೆಗಳು 6 ಸಾವಿರಕ್ಕೂ ಹೆಚ್ಚು ಮಂದಿರಗಳನ್ನು ಕೆಡವಿ ಮಸೀದಿಗಳಾಗಿ ಪರಿವರ್ತನೆ ಮಾಡಿದರು. ಇಂತಹ ಇತಿಹಾಸದ ಘಟನೆಗಳಿಂದ ಹಿಂದೂಗಳು ಎಚ್ಚೆತ್ತುಕೊಳ್ಳಬೇಕು. ಸನಾತನ ಸಂಸ್ಕೃತಿಗೆ ತನ್ನದೇ ಆದ ಇತಿಹಾಸವಿದೆ. ಮಕ್ಕಳಿಗೆ ಶಿವಾಜಿ ಮಹಾರಾಜ, ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮ, ಬಸವಣ್ಣನವರ ಇತಿಹಾಸ ತಿಳಿಸಬೇಕಿದೆ ಎಂದರು.

ಈ ವೇಳೆ ಶಿವಪ್ಪ ನಾಯಕ್, ವಿಜಯಕುಮಾರ ಗಡ್ಡಿ, ಲಕ್ಷ್ಮಣ್ ಸಂತರು, ಮಹೇಶ್ ರೋಖಡೆ, ಸೋಮು ಗುಡಿ, ಸಹದೇವ ಗಣಾಚಾರಿ, ಕೆ.ಸಿ. ಮಲ್ಲಾಪೂರ, 2025ರ ಸಮಿತಿಯ ವಿರೂಪಾಕ್ಷಪ್ಪ ಹೆಬ್ಬಳ್ಳಿ, ಸುರೇಶ್ ಲಮಾಣಿ, ರಾಜಣ್ಣ ಮಲ್ಲಾಡದ, ರವಿಕಾಂತ್ ಅಂಗಡಿ, ವೆಂಕಟೇಶ್ ರಾಥೋಡ್, ಮೋಹನ್ ಗ್ವಾರಿ, ಶರತರಾವ್ ಹುಯಿಲಗೋಳ, ಅಜ್ಜಣ್ಣ ಮಲ್ಲಾಡದ, ರಾಜು ಮುಧೋಳ, ಅವಿನಾಶ್ ಜೈನ್, ಮಂಜು ಗಜಾಕೋಶ, ಫಕ್ಕಿರಸಾಬ್ ಬಾಂಡಗೆ, ಕುಮಾರ ನಡಗೇರಿ, ಐ.ಎಸ್. ಪೂಜಾರ, ರವಿ ಕರಬಸಣ್ಣನವರ, ಅನಿಲ ಅಬ್ಬಿಗೇರಿ, ಬಸವರಾಜ ಹುಬ್ಬಳ್ಳಿ, ಸಂತೋಷ್ ಪವಾರ, ದೇವು ಲಮಾಣಿ, ವಿಠ್ಠಲ ತೋಟದ, ವಿಠ್ಠಲ ಬಾಂಡಗೆ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಕಷ್ಟು ಪೂರ್ವತಯಾರಿ ನಡೆಸಲಾಗಿತ್ತು. ಎಲ್ಲ ಹಿಂದೂ ಬಾಂಧವರು ಸ್ವಇಚ್ಛೆಯಿಂದ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿದ್ದಾರೆ. ನಮ್ಮತನವನ್ನು ನಾವು ಕಾಪಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಬೇರೆಯವರ ನೋವಿಗೆ ನಾವು ಸ್ಪಂದಿಸಬೇಕಿದೆ. ರಾಜು ಖಾನಪ್ಪನವರ ಹಿಂದೂತ್ವಕ್ಕಾಗಿ ನಿರಂತರ ಜಾಗೃತಿ, ಹೋರಾಟ ಮಾಡುತ್ತಾ ಬಂದಿದ್ದಾರೆ. ನಾವೆಲ್ಲರೂ ಅವರಿಗೆ ಬೆನ್ನೆಲುಬಾಗಿ ನಿಲ್ಲೋಣ.

  • ಜಗದೀಶ್ ಎಸ್.ಪಿ.
    ಜಯಂತ್ಯುತ್ಸವದ ಮಾಜಿ ಅಧ್ಯಕ್ಷ.

“ಹಿಂದೂಗಳು ಹಿಂದೂಗಳಾಗಿಯೇ ಉಳಿಯಲು ಛತ್ರಪತಿ ಶಿವಾಜಿ ಮಹಾರಾಜರು ಪ್ರಮುಖ ಕಾರಣೀಕರ್ತರಾಗಿದ್ದಾರೆ. ಆದರೆ, ಇಂದು ಅದೇ ಹಿಂದೂಗಳಲ್ಲಿ ಜಾತಿ ಎಂಬ ವಿಷಬೀಜ ಹೊಕ್ಕಿರುವುದು ದುರಂತದ ಸಂಗತಿಯಾಗಿದೆ. ಮಹಾಪುರುಷರಿಗೆ ಯಾವುದೇ ಜಾತಿಗಳು ಇರಲಿಲ್ಲ. ಯುವಕರು ಹಿಂದೂ ಸಂಘಟನೆಗಳನ್ನು ಅಪ್ಪಿಕೊಂಡು ಸಮಾಜವನ್ನು ಒಂದುಗೂಡಿಸಬೇಕು. ಮಹಿಳೆಯರು ಹಿಂದೂ ಸಂಘಟನೆಯಲ್ಲಿ ಪಾಲ್ಗೊಳ್ಳಬೇಕಿದೆ”

  • ರಾಜು ಖಾನಪ್ಪನವರ.
    ಕ.ರಾ.ಹಿಂ ಸಂಘಟನೆಗಳ ಒಕ್ಕೂಟದ
    ರಾಜ್ಯ ಸಂಚಾಲಕ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!