HomeGadag Newsಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘದ ಸದಸ್ಯರಿಗೆ ಸಾಹಿತಿ ಮಕಾನದಾರ ಕರೆ

ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘದ ಸದಸ್ಯರಿಗೆ ಸಾಹಿತಿ ಮಕಾನದಾರ ಕರೆ

For Dai;y Updates Join Our whatsapp Group

Spread the love

ಸರ್ಕಾರಿ ನೌಕರರಲ್ಲಿ ಕರ್ತವ್ಯ ನಿಷ್ಠೆ, ಜವಾಬ್ದಾರಿ, ಸಮಯಪ್ರಜ್ಞೆ, ದಕ್ಷತೆ, ಸಾರ್ವಜನಿಕ ಸೇವೆಯ ಮಹತ್ವ ಮತ್ತು ಹೊಣೆಗಾರಿಕೆ ಪಾರದರ್ಶಕವಾಗಿರಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಿಗಿಂತ ನ್ಯಾಯಾಂಗ ಇಲಾಖೆಯೇ ನೌಕರ ಬಂಧುಗಳು. ಕಾರ್ಯದ ಒತ್ತಡ ನಡುವೆಯೂ ಸೇವೆಗೆ ಕಂಕಣ ಬದ್ಧರಾಗಿದ್ದಾರೆ ಎಂಬುದು ದಿಟ.

ಆಡಳಿತ ಸೇವಕರು ನಿರ್ವಹಣಾತ್ಮಕ ಯಂತ್ರದ ಹೃದಯ ಭಾಗವೆಂದು ಸರ್ದಾರ್ ವಲ್ಲಭ ಭಾಯಿ ಪಟೇಲರು 1947ರಲ್ಲಿ ಹೇಳಿದ ಮಾತು ಸರ್ವಕಾಲಿಕ ಸತ್ಯ. ನೌಕರ ಬಂಧುಗಳ ದೂರದೃಷ್ಟಿತ್ವದ ಫಲವಾಗಿ 25 ವರ್ಷಗಳ ಹಿಂದೆಯೇ ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘ ಅಸ್ತಿತ್ವಕ್ಕೆ ಬಂತು. ಸಂಬAಧ ಮಾಸಪತ್ರಿಕೆ ನ್ಯಾಯಿಕ ಮಿತ್ರರ ಮುಖವಾಣಿಯಾಗಿ ಕಾರ್ಯನಿರ್ವಹಿಸಿದೆ. ಸಂಘ ಕಟ್ಟುವಲ್ಲಿ ಅನೇಕ ಹಿರಿಯರ ಶ್ರಮ, ಬೆವರಿನ ಪಾಲು ಕೂಡ ಅಲ್ಲಗಳೆಯುವಂತಿಲ್ಲ. ಬೇರೆ ಇಲಾಖೆ ನೌಕರ ಬಂಧುಗಳ ಒಗ್ಗಟ್ಟಿನ ಮುಂದೆ ನ್ಯಾಯಂಗ ಇಲಾಖೆಯ ಒಗ್ಗಟ್ಟು, ಸಂಘಟನಾ ಶಕ್ತಿ ಸ್ವಲ್ಪ ಕುಂದಿದೆ ಅಂತಲೇ ಹೇಳಬೇಕು.

ಅದಕ್ಕೆಲ್ಲ ಹಲವು ಕಾರಣಗಳಿವೆ. ದಿನಾಂಕ 28ರಂದು ರಾಜ್ಯ ಕಾರ್ಯಕಾರಿ ಸಮಿತಿಯ ಚುನಾವಣೆ ಮಹತ್ವದ ಘಟ್ಟ ತಲುಪಿದೆ. ನಿನ್ನೆಯಾದ ಲೋಪಗಳು ನಾಳೆಗೆ ಮರುಕಳಿಸಬಾರದು. ನೌಕರ ಬಂಧುಗಳ ಶ್ರೇಯಸ್ಸಿಗಾಗಿ ತಪಸ್ಸಿನ ರೀತಿಯಲ್ಲಿ ಹೋರಾಟ ಮಾಡುವ ಸಂಘದ ಸದಸ್ಯರ ಹಿತ ಕಾಯುವ ಪ್ರಾಮಾಣಿಕ ವ್ಯಕ್ತಿಗಳ ಕೈಗೆ ಅಧಿಕಾರದ ಚುಕ್ಕಾಣಿ ಕೊಡಬೇಕಿದೆ. ಹೊಸ ಕನಸುಗಳನ್ನು ನನಸು ಮಾಡಲು ಸಂಕಲ್ಪ ಹೊಂದಿರುವ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾದರೆ ಜವಾಬ್ದಾರಿ ಕೂಡ ಇದೆ. ಮತದಾರ ಬಂಧುಗಳು ವಿವೇಚನೆಯಿಂದ ಆತ್ಮಸಾಕ್ಷಿಯ ಅನುಗುಣವಾಗಿ ಸಮರ್ಥ ನಾಯಕತ್ವ ಗುಣದ ಅಭ್ಯರ್ಥಿಗಳ ಗೆಲುವಿಗಾಗಿ ಮತದಾನ ಮಾಡಬೇಕಾಗಿದೆ.

ಓಪಿಎಸ್ ಜಾರಿಗಾಗಿ ರಾಷ್ಟ್ರವ್ಯಾಪ್ತಿ ಹೋರಾಟ ಮಾಡಿದ್ದು ಇತಿಹಾಸ. ನ್ಯಾಯಾಂಗ ಇಲಾಖೆಯ ಬಂಧುಗಳ ಏಕರೂಪ ವೇತನ, ಇಲಾಖೆ ಬಡ್ತಿ, ಶಿಶುಪಾಲನಾ ರಜೆ, ಖಾಲಿ ಹುದ್ದೆಗಳ ಭರ್ತಿ, ಹಿರಿಯ ಶಿರಸ್ತೇದಾರ ಹುದ್ದೆಗೆ ಪತ್ರಾಂಕಿತ ಸ್ಥಾನಮಾನ, ಅಧೀನ ನ್ಯಾಯಾಲಯಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವುದು, ಅಂತರ್ಜಿಲ್ಲಾ ವರ್ಗಾವಣೆ ಪದೋನ್ನತಿ, ವಾರ್ಷಿಕ ವೈದ್ಯಕೀಯ ತಪಾಸಣೆ, ಪಾರದರ್ಶಕ ಆಡಳಿತ, ಎಫ್‌ಎನ್‌ಜೆಪಿಸಿ ಅನುಷ್ಠಾನದಲ್ಲಿರುವ ಕೆಲ ತಾಂತ್ರಿಕ ತೊಂದರೆಗಳ ನಿವಾರಣೆ, ಅಧೀನ ನ್ಯಾಯಾಲಯಗಳ ಸಿಬ್ಬಂದಿ ಸಮಸ್ಯೆ, ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗ ತಾರತಮ್ಯ ನಿವಾರಣೆ ಹೀಗೆ ಹಲವಾರು ಸಮಸ್ಯೆಗಳಿಗೆ ನಾಡಿನ ತುಂಬೆಲ್ಲ ಯಾವುದೇ ಮಹಿಳಾ ನೌಕರರ ಕಷ್ಟಗಳಿಗೆ ಸ್ಪಂದಿಸುವ ತಾಯಿಗುಣ ಹೊಂದಿದವರು ಎಂ. ಮಲ್ಲಿಕಾ.

ಇಂತಹ ಅಪರೂಪದ ಸಂಘಟನಾ ಚತುರ ನಾಯಕಿಗೆ ನಮ್ಮ ಬೆಂಬಲ ಅವಶ್ಯವಾಗಿದೆ. ಮಹತ್ವಾಕಾಂಕ್ಷೆಯು ಕಾರ್ಯಕ್ಷಮತೆಯನ್ನು ಮೀರಿಸಿದಾಗ ಅದು ಹತಾಶೆಗೆ ಕಾರಣವಾಗುತ್ತದೆ. ಆದರೆ, ಕಾರ್ಯಕ್ಷಮತೆಯು ಮಹತ್ವಾಕಾಂಕ್ಷಿಯನ್ನು ಮೀರಿಸಿದಾಗ ಅದನ್ನು ಯಶಸ್ಸು ಎಂದು ಕರೆಯುತ್ತಾರೆ. ಇಂತಹ ಯಶಸ್ಸಿಗೆ ಮುನ್ನುಡಿ ಬರೆಯಲು ಎಂ. ಮಲ್ಲಿಕಾ ಅವರ ತಂಡವನ್ನು ಬೆಂಬಲಿಸಿ.

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ಉಪಾಧ್ಯಕ್ಷರಾಗಿ, ಎನ್‌ಪಿಎಸ್ ಹೋರಾಟದ ಮುಂಚೂಣಿಯಲ್ಲಿದ್ದು ದೇಶದ ತುಂಬ ತಿರುಗಾಡಿ ನೌಕರರ ಬಂಧುಗಳಲ್ಲಿ ಜಾಗೃತಿ ಮೂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಋತುಚಕ್ರ ರಜೆ ಮಂಜೂರಾತಿಗಾಗಿ ಶ್ರಮಿಸಿ, ಕಳೆದ ಎರಡು ದಶಕಗಳಿಂದ ಹೋರಾಟದ ಹಾದಿಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಹೆಜ್ಜೆ ಹಾಕುತ್ತಿರುವ ಎಂ. ಮಲ್ಲಿಕಾ ಒಬ್ಬ ಸಮರ್ಥ ನಾಯಕತ್ವ ಗುಣದ ಅಭ್ಯರ್ಥಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಮಕಾನದಾರ ಅಭಿಪ್ರಾಯಪಟ್ಟಿದ್ದಾರೆ.

  • ಎ.ಎಸ್. ಮಕಾನದಾರ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!