ವಿಜಯಸಾಕ್ಷಿ ಸುದ್ದಿ, ಗದಗ:

ಗದಗ-ಬೆಟಗೇರಿ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕೆಲ ಅಭ್ಯರ್ಥಿಗಳು ಶನಿವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದದ್ದರಿಂದ 19 ಮಂದಿ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ. ಅಂತಿಮವಾಗಿ 146 ಜನ ಕಣದಲ್ಲಿ ಉಳಿದಿದ್ದಾರೆ.

ವಾರ್ಡ್ ನಂ.25ನ ಬಿಜೆಪಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ದ ರವಿ ಸಿದ್ದಲಿಂಗ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದ ರವಿ ಸಿದ್ಧಲಿಂಗ ಅವರನ್ನು ಮನವೊಲಿಸುವಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಹಾಗೆಯೇ ಬಹುತೇಕ ವಾರ್ಡ್’ಗಳಲ್ಲಿ ಕಾಂಗ್ರೆಸ್ನ ಗೆಲುವಿಗೆ ಅಡ್ಡಿಯಾಗಿದ್ದ ಪಕ್ಷೇತರರ ಮನವೊಲಿಸಲು ಮುಖಂಡರು ಯಶಸ್ವಿಯಾಗಿದ್ದಾರೆ. ಆದರೂ ಕಾಂಗ್ರೆಸ್ನ ಕೆಲ ಬಂಡಾಯ ಅಭ್ಯರ್ಥಿಗಳ ಮನವೊಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ಪಕ್ಷದ ಅಭ್ಯರ್ಥಿಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಲಿದ್ದಾರೆ.
ನಾಮಪತ್ರ ಹಿಂಪಡೆದವರ ವಿವರ:
ವಾರ್ಡ್ ನಂ.2 ಗೋಕಾವಿ ಪ್ರಶಾಂತ್ ಪರಶುರಾಮ,
ವಾರ್ಡ್ ನಂ.3 ಅಶೋಕ ಹೇಮಣ್ಣಮುಳಗುಂದ , ವಾರ್ಡ್ ನಂ.6 ನಂದಿನಿ ಮಂಜುನಾಥ ಮುಳಗುಂದ ಹಾಗೂ ಓಂಕಾರೇಶ್ವರಿ ಗೋಕಾಕ,
ವಾರ್ಡ್ ನಂ.7 ತಿಮ್ಮಯ್ಯ ರಂಗಯ್ಯ ಕೊಂಗತಿ,
ವಾರ್ಡ್ ನಂ.10 ಇಮ್ತಿಯಾಜ್ಅಹ್ಮದ್ ರಜಾಕಸಾಬ ಮಾನ್ವಿ ಹಾಗೂ ಮಹೇಶ ಗದುಗಿನ, ವಾರ್ಡ್ ನಂ.13 ಶ್ರೀಕಾಂತ್ ಶ್ರೀನಿವಾಸ್ ನಾಯರ, ವಾರ್ಡ್ ನಂ.16 ರಾಘವೇಂದ್ರ ಪರಾಪುರ ಹಾಗೂ ಲಕ್ಷ್ಮಣ ಹಳ್ಳಿಕೇರಿ ವಾರ್ಡ್ ನಂ.18 ಕಮಾನಗಾರ ಅಬ್ದುಲ್ ಖಾದರ್ ಜೈಲಾನಿ ಮಹ್ಮದ್ ಇಸ್ಮಾಯಿಲ್,

ವಾರ್ಡ್ ನಂ.21 ಶಿವಲಿಂಗಪ್ಪ ಮಗ್ಗಪ್ಪ ತುರಖಾನಿ,
ವಾರ್ಡ್ ನಂ.22 ಫಾರುಕ್ ಮುಲ್ಲಾ,
ವಾರ್ಡ್ ನಂ.23 ಮುಲ್ಲಾ ಮಹ್ಮದ್ ಶಾಹಿದ್, ವಾರ್ಡ್ ನಂ.24 ರಂಗಪ್ಪ ಯರಗುಡಿ,
ವಾರ್ಡ್ ನಂ.25 ರವಿ ಸಿದ್ದಲಿಂಗ ಹಾಗೂ ಪ್ರಫುಲ್ ದಾಸ್ ಪುಣೇಕರ್, ವಾರ್ಡ್ ನಂ.27 ಮಾಲನಬಿ ಫಕ್ರುದ್ದೀನ್ ಹೊಸಳ್ಳಿ, ವಾರ್ಡ್ ನಂ.34 ಸೀತಲ್ ಸೋಮಪ್ಪ ಲಮಾಣಿ