ವಿಜಯಸಾಕ್ಷಿ ಸುದ್ದಿ, ಡಂಬಳ: ರೋಣ ಕ್ಷೇತ್ರದ ಶಾಸಕ ಹಾಗೂ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ ಅವರಿಗೆ ರಾಜ್ಯ ಸಚಿವ ಸಂಪುಟದ ಎರಡನೇ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪಾದಯಾತ್ರೆ ಕೈಗೊಂಡಿದ್ದಾರೆ.
ಡಂಬಳ ಗ್ರಾಮದಿಂದ ಪಾದಯಾತ್ರೆಗೆ ತೆರಳುವ ಮುನ್ನ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಬಸವರಡ್ಡಿ ಬಂಡಿಹಾಳ, ರೋಣ ಕ್ಷೇತ್ರದ ಅಭಿವೃದ್ಧಿ ಹಾಗೂ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಜಿ.ಎಸ್. ಪಾಟೀಲ ಅವರ ಕೊಡುಗೆ ಅಪಾರವಾಗಿದೆ. ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಕ್ಷೇತ್ರದ ಕಾರ್ಯಕರ್ತರ ಬಹುಕಾಲದ ಬೇಡಿಕೆಯಾಗಿದ್ದು, ಪಕ್ಷದ ವರಿಷ್ಠರು ಈ ಬೇಡಿಕೆಗೆ ಸ್ಪಂದಿಸುವ ವಿಶ್ವಾಸವಿದೆ ಎಂದು ಹೇಳಿದರು.
ತುಮಕೂರಿನ ಸಿದ್ದಗಂಗಾ ಮಠದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದವರೆಗೆ ಬುಧವಾರ ಮತ್ತು ಗುರುವಾರ ಪಾದಯಾತ್ರೆ ನಡೆಯಲಿದ್ದು, ಇದರ ಮೂಲಕ ಪಕ್ಷದ ವರಿಷ್ಠರ ಗಮನ ಸೆಳೆದು ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ದೊರಕಿಸಿಕೊಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಪಾದಯಾತ್ರೆಯಲ್ಲಿ ಮರಿಯಪ್ಪ ಸಿದ್ದಣ್ಣವರ, ಕುಬೇರಪ್ಪ ಕೊಳ್ಳಾರ, ಮಹೇಶ ಗಡಗಿ, ಮಂಜುನಾಥ ಸಂಜಿವಣ್ಣವರ, ಸುರೇಶ ಗಡಗಿ, ಹನಮಂತಪ್ಪ ಗದಗಿನ, ಶರಣು ಬಂಡಿಹಾಳ, ಬಾಬುಸಾಬ ಮೂಲಿಮನಿ, ಮಲ್ಲಿಕಾರ್ಜುನ ಪ್ಯಾಟಿ, ರಾಜು ಆದಮ್ಮನವರ, ಮುತ್ತಣ್ಣ ಕೊಂತಿಕಲ್ಲ, ಬಸವರಾಜ ಶಿರೋಳ, ಸೌಕತಲಿ ಡೋಲಿ, ಮಹೇಶ ಬಿಸನಳ್ಳಿ, ಭೀಮಪ್ಪ ಗದಗಿನ, ತಿರಕಪ್ಪ ಕಟ್ಟೆಣ್ಣವರ, ಅಲ್ಲಾವುದ್ದೀನ್ ಹೊಂಬಳ, ಕಳ್ಳೆಪ್ಪ ಪೂಜಾರ, ಮಂಜುನಾಥ ನರಗುಂದ, ಮಾಬುಸಾಬ ಬೆಟಗೇರಿ, ಮರಿಯಪ್ಪ ಹಳ್ಳಾಕಾರ, ಮಹೆಬೂಬಸಾಬ ಆಲೂರ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.



