ವಿಜಯಸಾಕ್ಷಿ ಸುದ್ದಿ, ರೋಣ: ರೋಣ ತಾಲೂಕಿನ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ದಯಾನಂದ ಯಾವಗಲ್ಲ ಅವರನ್ನು ಅಖಿಲ ಕರ್ನಾಟಕ ಶಾಲಾ-ಕಾಲೇಜುಗಳ ಅನುದಾನಿತ ನೌಕರರ ಸಂಘದ ರೋಣ ತಾಲೂಕು ಘಟಕದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಬಿ.ಬಿ. ಮೇಗಲಮನಿ, ಕಾರ್ಯದರ್ಶಿ ಎಸ್.ಕೆ. ಆಡಿನ, ಖಜಾಂಚಿ ಕೆ.ಎಸ್. ಹಳ್ಳಳ್ಳಿ ಸೇರಿದಂತೆ ಸದಸ್ಯರಾದ ಎಸ್.ಎನ್. ಭರಮಗೌಡ್ರ, ಎಸ್.ಟಿ. ವಾಲ್ಮೀಕಿ, ಎಂ.ಎಸ್. ವಾಲ್ಮೀಕಿ, ಪಿ.ಪಿ. ವಾಲ್ಮೀಕಿ, ಎಂ.ಎಸ್. ಹೊಸಮನಿ, ಎಂ.ಕೆ. ಬಂಡಗರ್ ಹಾಗೂ ಪಿ.ಎಂ. ಮುನವಳ್ಳಿ ಉಪಸ್ಥಿತರಿದ್ದು, ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶುಭ ಹಾರೈಸಿದರು.



