ವಿಜಯಸಾಕ್ಷಿ ಸುದ್ದಿ, ಗದಗ
ಜುಲೈ 11ರಂದು ಗದಗ ಜಿಲ್ಲಾಧಿಕಾರಿ ಸುಂದರೇಶ್ ಬಾಬು ಅವರ ವರ್ಗಾವಣೆ ನಂತರ ಗದಗ ಜಿಲ್ಲಾಧಿಕಾರಿಯಾಗಿ ಹೊನ್ನಾಂಬ ಅವರು ನೇಮಕವಾಗಿದ್ದರು.
ಆದರೆ ಅವರು ಅಧಿಕಾರ ಸ್ವೀಕರಿಸಲು ಹಿಂದೇಟು ಹಾಕಿದ್ದರಿಂದ ಸ್ಥಾನದ ನಿರೀಕ್ಷೆಯಲ್ಲಿದ್ದ 2014ರ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿ ದಿವ್ಯ ಪ್ರಭು ಜಿ ಆರ್ ಜೆ ಅವರನ್ನು ಸರಕಾರ ಗದಗ ಡಿಸಿಯನ್ನಾಗಿ ನೇಮಕ ಮಾಡಿ ಶನಿವಾರ ಸಂಜೆ ಆದೇಶ ಹೊರಡಿಸಿದೆ.