ವಿಜಯಸಾಕ್ಷಿ ಸುದ್ದಿ, ಮುಳಗುಂದ
Advertisement
ನಾಡಹಬ್ಬವಾದ ನವರಾತ್ರಿ ಉತ್ಸವ ನಿಮಿತ್ತ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ಶ್ರೀ ದೇವಿಯ ಘಟಸ್ಥಾಪನೆ ನಡೆಯಿತು. ಪಟ್ಟಣದ ಹಳೆಹುಡ ಓಣಿಯಲ್ಲಿ ಮತ್ತು ಚಿಂದಿಪೇಟಿ ಓಣಿಯ ರೇಣುಕಾ ಯಲ್ಲಮ್ಮಾ ಹಾಗೂ ಬೋಗೇರಿ ಓಣಿಯ ಸುಂಕಾಪೂರ ಮನೆತನದ ದೇವಿ ದೇವಸ್ಥಾನದಲ್ಲಿ 9ದಿನಗಳ ಕಾಲ ಪುರಾಣ ಪ್ರವಚನ ಪ್ರಾರಂಭವಾಗಿದ್ದು, ಬೆಳಿಗ್ಗೆಯಿಂದ ದೇವಸ್ಥಾನಗಳಲ್ಲಿ ದೇವಿ ಮೂರ್ತಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ, ಅಭಿಷೇಕ ನಡೆಯಿತು.