ಮೂರು ದಿನಗಳ ಕಾಲ ಖ್ಯಾತ ಕಲಾವಿದರಿಂದ ನೃತ್ಯ, ರಸಮಂಜರಿ ಹಾಗೂ ಭರತನಾಟ್ಯ ನಡೆಯಲಿದೆ……
ವಿಜಯಸಾಕ್ಷಿ ಸುದ್ದಿ, ಬಾಗಲಕೋಟೆ
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ ಸಿದ್ಧನಕೊಳ್ಳದ ಸಿದ್ದಪ್ಪಜ್ಜನ ಮಠದ ಧರ್ಮಾಧಿಕಾರಿಗಳಾದ ಡಾ. ಶಿವಕುಮಾರ್ ಮಹಾಸ್ವಾಮಿಗಳವರ ಸುಪುತ್ರರಾದ ರಾಜಶೇಖರಯ್ಯ ಮತ್ತು ಹರ್ಷ ಇವರ ಅಯ್ಯಾಚಾರ ಕಾರ್ಯಕ್ರಮ ಹಾಗೂ ಭಕ್ತಿಗೀತೆಯ ಆಲ್ಬಂ ಸಾಂಗ್ ಚಿತ್ರಿಕರಣ ಜು.12 ರಂದು ನೆರವೇರಲಿದೆ ಎಂದು ಡಾ.ಶಿವಕುಮಾರಸ್ವಾಮಿಗಳು ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಸಿದ್ದನಕೊಳ್ಳದಲ್ಲಿ ಜಾತ್ರಾಮಹೋತ್ಸವದ ವಿಡಿಯೋ ಆಲ್ಬಂಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸಿದ್ದನಕೊಳ್ಳಮಠದ ಶ್ರೀಗಳ ಜನ್ಮಸ್ಥಳವಾದ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮಾರನಬಸರಿ ಗ್ರಾಮವು ಸಿದ್ದಪ್ಪಜ್ಜ ಶ್ರೀಗಳು ನಡೆದಾಡಿದ ಪುಣ್ಯ ಸ್ಥಳವಾಗಿದೆ.
ಜು.12ರಂದು ನಡೆಯುವ ಕಾರ್ಯಕ್ರಮದ ಸಾನಿಧ್ಯವನ್ನು ನಿಡಗುಂದಿಕೊಪ್ಪದ ಪ.ಪೂ. ಶ್ರೀ ಅಭಿನವ ಚನ್ನಬಸವ ಮಹಾಸ್ವಾಮಿಗಳು ವಹಿಸುವುರು. ನೇತೃತ್ವವನ್ನು ಗುಳೆದಗುಡ್ಡದ ಮುರುಡಿಮಠದ ಪೂಜ್ಯಶ್ರೀ ಅಭಿನವ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿ.ಎಸ್.ಅರಳಲಿಮಠ ತಳಕಲ್ ಧಾರವಾಡ, ಉದ್ಘಾಟನೆ ರೋಣ ಶಾಸಕರಾದ ಜಿ.ಎಸ್.ಪಾಟೀಲ್ ಹಾಗೂ ದಂಪತಿಗಳು ನೆರವೇರಿಸುವರು. ಹುನಗುಂದದ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸಿ ಎಸ್ ನಾಡಗೌಡ, ಎನ್.ಎಚ್. ಕೋನರೆಡ್ಡಿ, ಭೀಮಸೇನ್ ಚಿಮ್ಮನಕಟ್ಟಿ, ದೊಡ್ಡನಗೌಡ ಪಾಟೀಲ್ ಇವರು ಜ್ಯೋತಿ ಬೆಳಗಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಕಿಸಾನ್ ಸಮಿತಿ ನಿರ್ದೇಶಕರು ಹಾಗೂ ಕಾರ್ಯದರ್ಶಿಗಳಾದ ಡಾ.ಆರ್ ಎಸ್ ರಾಜು, ಡಾ.ಬಾಲಕೃಷ್ಣ ರೆಡ್ಡಿ, ನರೇಂದ್ರ ರೆಡ್ಡಿ, ಸುರೇಶ್ ಹಳೆಪೇಟೆ, ಮಲ್ಲು ವಿರಾಪುರ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತೆಲುಗು ಚಿತ್ರನಟ ರಾಜೇಶ್ ಕುಮಾರ್ ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ಪ್ರಮೋದ್ ಡ್ಯಾನ್ಸ್ ಅಕಾಡೆಮಿ ಉಗಾರ್ ಸಾಂಗ್ಲಿ ಇವರಿಂದ ನೃತ್ಯ, ಕಲಾವಿದ ಮೆಲೋಡಿಸ್ ಐಹೊಳೆ ಇವರಿಂದ ರಸಮಂಜರಿ, ಚಿತ್ರನಟಿ ಕೃತಿಕಾ ದಯಾನಂದ್ ಬೆಂಗಳೂರು ಇವರಿಂದ ಭರತನಾಟ್ಯ ಜರುಗಲಿದೆ. ದಿ.೧೨ ರಿಂದ ದಿ.೧೪ರವರೆಗೆ ಭಕ್ತಿಗೀತೆಯ ಆಲ್ಬಂಸಾಂಗ್ ಚಿತ್ರಿಕರಣ ನಡೆಯಲಿದ್ದು, ಸಕಲ ಸದ್ಭಕ್ತರು ಆಗಮಿಸಬೇಕೆಂದು ಸಿದ್ದನಕೊಳ್ಳಮಠದ ಧರ್ಮಾಧಿಕಾರಿಗಳಾದ ಡಾ.ಶಿವಕುಮಾರ್ ಮಹಾಸ್ವಾಮಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಚಲನಚಿತ್ರ ನಟ, ಕಲಾನಿರ್ದೇಶಕ ವೀರೇಶ್ ಪುರವಂತರ, ಚಲನಚಿತ್ರ ಛಾಯಾಗ್ರಾಹಕ ಶಿವಶರಣ ಸುಗ್ನಳ್ಳಿ , ಚಲನಚಿತ್ರ ಪಿಆರ್ಓ ಡಾ.ಪ್ರಭು ಗಂಜಿಹಾಳ, ಕಲಾವಿದರಾದ ಸಂಗನಗೌಡ್ರ ಕುರುಡಗಿ ಮೊದಲಾದವರು ಉಪಸ್ಥಿತರಿದ್ದರು.