ಸಾರಿಗೆ ಸಂಸ್ಥೆಯ ಅಧಿಕಾರಿಯಿಂದ ಕೇಸ್…
ವಿಜಯಸಾಕ್ಷಿ ಸುದ್ದಿ, ಗದಗ
ಗದಗ ಜಿಲ್ಲೆಯ ರೋಣದ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕರು, ಇಂಧನ ಖರೀದಿಸಿದ ಇನ್ ವೈಸ್ ನಂ.14486 ದಿ. 02/05/2022 ಮೊತ್ತ 4.68.402.48ರೂ. ಹಾಗೂ ಇನ್ ವೈಸ್ ನಂ. 14507 ದಿ.04/05/2022 ಮೊತ್ತ 3.86.427.28ರೂ. ಗಳಿಗೆ ಸಂಬಂಧಿಸಿದಂತೆ ಬಿಲ್ ಪಾವತಿಸುವಂತೆ ದಿ.09/05/2022 ರಂದು ಗದಗ ಸಹಾಯಕ ಅಕೌಂಟೆಂಟ್ ಕಚೇರಿಗೆ ಕಳುಹಿಸಿದ್ದರು.
ಆ ಪ್ರಕಾರ ಸದರಿ ಬಿಲ್ ಗಳ ಮೊತ್ತವನ್ನು ಡಿಸ್ಕೌಂಟ್ ಮತ್ತು ಟಿ.ಡಿ.ಎಸ್ ಕಡಿತ ಮಾಡಿ ಅವುಗಳ ಒಟ್ಟು ಮೊತ್ತ 8.50.799=00 ರೂ. ಮೊತ್ತವನ್ನು ಚೆಕ್ ನಂ.[ಧನಾದೇಶ ಸಂಖ್ಯೆ] 22223 ಚೆಕ್ ಮೂಲಕ ನಜರ್ ಚೂಕಿನಿಂದ ಪಾರ್ವತಿ ಪೆಟ್ರೋಲಿಯಂ ಗದಗ ಇವರ ಖಾತೆ ಸಂಖ್ಯೆ : 30314766975 , ಐ.ಎಫ್ ಎಸ್.ಸಿ ಕೋಡ್ ; ಎಸ್.ಬಿ. ಐ.ಎನ್ 0000838ನೇದ್ದಕ್ಕೆ ಆರ್ ಟಿ ಜಿ ಎಸ್ ಮೂಲಕ ಜಮಾ ಮಾಡಲಾಗಿದೆ.
ಆದರೆ ತಪ್ಪಾಗಿ ಜಮಾ ಮಾಡಿದ ಹಣವನ್ನು ಮರು ಸಂದಾಯ ಮಾಡುವಂತೆ ಗದಗ ಪಾರ್ವತಿ ಪೆಟ್ರೋಲಿಯಂ ಮಾಲೀಕರಾದ ಈಶ್ವರಸಾ ಮೆಹರವಾಡೆ ಇವರನ್ನು ಹಲವು ಬಾರಿ ಕೇಳಿಕೊಂಡರು ಕೂಡ ಸಾರಿಗೆ ಇಲಾಖೆಗೆ ಮರು ಸಂದಾಯ ಮಾಡದೇ ವಂಚಿಸಿದ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ
ಸಾರಿಗೆ ಇಲಾಖೆಯ ಅಧಿಕಾರಿ ನೂರ ಅಹ್ಮದ್ ದಾದಾಪೀರ್ ಗೋಲಾಂದಜ್ ಎಂಬುವರು ದೂರು ನೀಡಿದ್ದು, 0092/2023 ಐಪಿಸಿ 1860 (U/s-420) ಪ್ರಕರಣ ದಾಖಲಾಗಿದೆ.