ಬೆಂಗಳೂರು ;- ಸಿಎಂ ಸಿದ್ದರಾಮಯ್ಯ ಅವರ ಫೋಟೋವನ್ನು ಮಹಿಷಾಸುರನ ಪೋಟೋ ಜೊತೆ ಮಾರ್ಫ್ ಮಾಡಿದ್ದ ವ್ಯಕ್ತಿ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ.ಸೀನಾ ಹಿಂದೂಸ್ತಾನಿ ಅನ್ನೋ ಫೇಸ್ ಬುಕ್ ನಲ್ಲಿ ಪೇಜ್ ನಲ್ಲಿ ಎಡಿಟ್ ಮಾಡಲಾಗಿದ್ದು, ಮಹಿಷಾಸುರನ ಫೋಟೋಗೆ ಸಿದ್ದರಾಮಯ್ಯ ಮುಖಬಳಸಿ ‘ತೋಲಾಂಡಿಗಳು ಸೇರಿಕೊಂಡು ಮುಂದಿನ ವರ್ಷ “ಸಿದ್ದುಸುರಾ ದಸರಾ ” ಮಾಡಿದರು ಆಶ್ಚರ್ಯ ಪಡಬೇಕಿಲ್ಲ’ ಎಂದು ಪೋಸ್ಟ್ ಮಾಡಿದ್ದರು.
Advertisement
ಇದು ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ವಕೀಲ ಕಾಂಗ್ರೆಸ್ ವಕ್ತಾರ ಸೂರ್ಯಮುಕುಂದರಾಜ್ ಅವರಿಂದ ಹೈಗ್ರೌಂಡ್ ಠಾಣೆಗೆ ದೂರು ನೀಡಿದ್ದಾರೆ. ಸೂರ್ಯ ಮುಕುಂದರಾಜ್ ದೂರಿನ ಮೇರೆಗೆ ಸೀನಾ ಹಿಂದೂಸ್ತಾನಿ ಎಫ್ ಬಿ ಖಾತೆ ಬಳಕೆ ದಾರನ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.