5 ವರ್ಷದವರೆಗೆ ಸಿಎಂ ಆಗಿ ಸಿದ್ದರಾಮಯ್ಯ ಇರೋ ವಿಚಾರ ಅವರನ್ನೇ ಕೇಳಿ: ಸಚಿವ ಸಂತೋಷ್ ಲಾಡ್

0
Spread the love

ಧಾರವಾಡ: 5 ವರ್ಷದವರೆಗೆ ಸಿಎಂ ಆಗಿ ಸಿದ್ದರಾಮಯ್ಯ ಇರೋ ವಿಚಾರ ಅವರನ್ನೆ ಕೇಳಿ ಎಂದು ಧಾರವಾಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.‌

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 30 ವರ್ಷದಿಂದ ಸತೀಶ್ ಜಾರಕಿಹೊಳಿ ಅವರನ್ನು ನೋಡ್ತಾ ಇದೀನಿ. ಅವರು ಅಂಬೇಡ್ಕರ್, ಬಸವ ವಾದ ಇರೋ ನಾಯಕರು, ಅದಲ್ಲದೆ ಸಿಂಪಲ್ ಹ್ಯೂಮನ್ ಬಿಯಿಂಗ್ ಕೂಡ ಇದಾರೆ. ಯಾವುದೇ ರೀತಿಯಾಗಿ ರಾಜಕೀಯವಾಗಿ ಡಿಪೆರೆನ್ಸ್‌ಗಳನ್ನ ಬಹರಂಗವಾಗಿ ಹೇಳಲ್ಲ ಎಂದು ಹೇಳಿದರು.

ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಬಿಜೆಪಿ ಆಪರ್ ವಿಚಾರ

ಬಿಜೆಪಿ ಕಳೆದ 10 ವರ್ಷದಲ್ಲಿ 2500 ಶಾಸಕರನ್ನ ಖರೀದಿ ಮಾಡಿದ್ದಾರೆ. ಬಿಜೆಪಿ ದುಡ್ಡಿನ ಪಾರ್ಟಿ, ಅವರು ಶಾಸಕರುಗಳಿಗೆ ಆಫರ್ ಮಾಡೆ ಮಾಡ್ತಾರೆ. ಬಿಜೆಪಿಯ ಪಕ್ಷದ್ದು ಆಫಿಶಿಯಲ್ ಆಗಿ 7,500 ಕೋಟಿ ಇದೆ ಎಂದು ಅವರೆ ಡಿಕ್ಲೇರ್ ಮಾಡಿದ್ದಾರೆ.

ಕಳೆದ 10 ವರ್ಷದಿಂದ ಅವರು ಹಣ ಹೆಚ್ಚಳ ಮಾಡಿಕೊಂಡಿದ್ದಾರೆ. ಪಿ ಎಮ್ ರಿಲೀಫ್‌ ಫಂಡ್ ಅದಕ್ಕೆ 30 ಸಾವಿರ ಕೋಟಿ ಆಗಿದೆ. ಪಿಎಮ್ ರಿಲೀಫ್‌ ಫಂಡ್‌‌ನಲ್ಲಿ ನಾವು ಗುಜರಾತಿನಲ್ಲಿ ಸ್ಟೇಡಿಯಂ ಕಟ್ಟಿದ್ದೆವೆ. ಆದ್ರೆ ಅವರು ಒಂದು ಆಸ್ಪತ್ರೆಯನ್ನ ಕೂಡ ಕಟ್ಟಲಿಲ್ಲ ಎಂದು ಸಂತೋಷ್ ಲಾಡ್‌ ಹೇಳಿದರು.


Spread the love

LEAVE A REPLY

Please enter your comment!
Please enter your name here