ಹುಬ್ಬಳ್ಳಿ; ಜೂಜಾಟ ಅಡ್ಡೆಗಳ ಮೇಲೆ ತಾಲ್ಲೂಕಿನ ಕಂಪ್ಲಿಕೊಪ್ಪ ಹಾಗೂ ಕಿರೇಸೂರ ಗ್ರಾಮಗಳಲ್ಲಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಏಳು ಜನರನ್ನು ಬಂಧಿಸಿದ್ದಾರೆ.ಕಂಪ್ಲಿಕೊಪ್ಪ ಗ್ರಾಮದ ಕೆರೆ ಬಳಿ ಆರು ಜನ ಜೂಜಾಟದಲ್ಲಿ ತೊಡಗಿದ್ದರು. ಅವರಿಂದ ₹47,210 ಮತ್ತು ಕಿರೇಸೂರ ಗ್ರಾಮದಲ್ಲಿ ಒಬ್ಬನನ್ನು ಬಂಧಿಸಿ ₹5,150 ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
Advertisement
ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಆರ್. ಚನ್ನಣ್ಣವರ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, ಪಿಎಸ್ಐಗಳಾದ ಸಚಿನ್ ಆಲಮೇಲಕರ, ಚಾಮುಂಡೇಶ್ವರಿ ಡಿ., ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.